ಪಡೀಲ್ ವೇದಾವತಿಯವರ ಚಿಕಿತ್ಸೆಗೆ 5 ಲಕ್ಷ ಮಂಜೂರು- ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಿಎಂ

0

ಪುತ್ತೂರು: ಪುತ್ತೂರಿನ ಪಡೀಲ್ ನಿವಾಸಿ ವೇದಾವತಿ ಯು ಶೆಟ್ಟಿ ಎಂಬ ಮಹಿಳೆಯೋರ್ವರು ತನ್ನ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಶಾಸಕರಾದ ಅಶೋಕ್ ರಐ ಕಚೇರಿಗೆ ಬಂದು ಹೇಳಿಕೊಂಡಿದ್ದರು, ತನಗೆ ಮೆದುಳು ಸಂಬಂಧಿತ ಕಾಯಿಲೆ ಇದ್ದು ಚಿಕಿತ್ಸೆಗೆ 15 ಲಕ್ಷ ಬೇಕಾಗುತ್ತದೆ. ನಾವು ಕಡುಬಡವರು ನಮಗೆ ಯಾರೂ ಸಹಾಯ ಮಾಡುವವರಿಲ್ಲ ನೀವೇ ನಮಗೆ ಏನಾದರೂ ದಾರಿ ತೋರಿಸಬೇಕು ಎಂದು ಕಣ್ಣೀರು ಹಾಕಿದ್ದರು. ಮಹಿಳೆಯ ನೋವು ಆಲಿಸಿದ ಶಾಕರು ನಿಮ್ಮ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಬಳಿ ಹೇಳುತ್ತೇನೆ ಅವರು ಸಹಾಯ ಖಂಡಿತಾ ಮಾಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಮಹಿಳೆಗೆ ಸಾಂತ್ವನ ಹೇಳಿ ಕಳಿಸಿದ್ದರು.


ಶುಕ್ರವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿಯದ ಶಾಸಕರು ಮಹಿಳೆಯ ಅನಾರೋಗ್ಯ ಮತ್ತು ಬಡತನದ ಬಗ್ಗೆ ವಿವರಿಸಿದ್ದರು. ತೀರಾ ಬಡತನದಲ್ಲಿರುವ ಮಹಿಳೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಶಾಸಕರ ಬಡವರ ಮೇಲಿನ ಕಾಳಜಿಗೆ ಮನಸೋತ ಸಿದ್ದರಾಮಯ್ಯ ಅವರು ನಿಮ್ಮ ಬಡವರ ಮೇಲಿನ ಪ್ರೀತಿಗೆ ನಾನು ಸೋತಿದ್ದೇನೆ, ನೀವು ಬಡವರಿಗಾಗಿ ತುಂಬಾ ಸಹಾಯ ಮಾಡುತ್ತಿದ್ದೀರಿ ಎಂಬ ವಿಚಾರವೂ ನನಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಕ್ಷೇತ್ರ ವ್ಯಾಪ್ತಿಯ ಮಹಿಳೆ ನಿಮ್ಮ ಬಳಿ ಸಹಾಯ ಕೇಳಿ ಬಂದಿದ್ದಾರೆ ಅವರಿಗೆ ನಿರಾಸೆಯಾಗಬಾರದು ಎಂದು ಹೇಳಿ ೫ ಲಕ್ಷ ರೂ ಮಂಜೂರು ಮಾಡುತ್ತೇನೆ ಎಂದು ಶಾಸಕರ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಮಹಿಳೆಯ ನೋವು ಕೇಳಿ ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಬದುಕುವ ಆಸೆ ಎಲ್ಲರಿಗೂ ಇರುತ್ತದೆ, ಅನಾರೋಗ್ಯ ಸಮಸ್ಯೆ ಬಂದಾಗ ಬಡವರು ದಿಕ್ಕೇ ತೋಚದಂತಾಗುತ್ತಾರೆ ಅಂಥವರಿಗೆ ನಾವು ಸಹಾಯ ಮಾಡಬೇಕಾಗಿದೆ ಅದು ನನ್ನ ಕರ್ತವ್ಯವೆಂದು ಭಾವಿಸಿ ನಾನೇ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ಹೇಳಿದ್ದೇನೆ ಅವರು 5 ಲಕ್ಷ ರೂ ಮಂಜೂರು ಮಾಡಿದ್ದಾರೆ. ಮುಖ್ಯಮಂತ್ರಿಯವರಿಗೆ ದನ್ಯವಾದ ಸಲ್ಲಿಸುತ್ತಿದ್ದೇನೆ
ಅಶೋಕ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here