ಪುತ್ತೂರು: ಸಜಂಕಾಡಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ಪೂರಕವಾಗುವ ವಿವಿಧ ಪ್ರಾಣಾಯಾಮಗಳು ಹಾಗೂ ಶಾರೀರಿಕ ದೃಢತೆಯನ್ನು ಉಂಟುಮಾಡುವ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ, ಮಾಹಿತಿಯೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಯೋಗ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು. ಶಿಕ್ಷಕ ಗಣೇಶ್ ನಾಯಕ್ ಪಿ ವಂದಿಸಿದರು.
![](https://puttur.suddinews.com/wp-content/uploads/2024/06/Untitled-6-8.jpg)