ಪಡುಬೆಟ್ಟು ಪರಿಸರದಲ್ಲಿ ಒಂಟಿ ಕಾಡಾನೆ ಸಂಚಾರ

0

ನೆಲ್ಯಾಡಿ: ನೆಲ್ಯಾಡಿ ಸಮೀಪದ ಪಡುಬೆಟ್ಟು ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಜೂ.23ರಂದು ಬೆಳಗ್ಗೆ ಸುಮಾರು 6.೦೦ ಗಂಟೆಯಿಂದ 7.೦೦ ಗಂಟೆಯ ಸಮಯದಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ವಿಷ್ಣುಮೂರ್ತಿ ದೇವಸ್ಥಾನದ ಬಳಿಯಿಂದ ಪಡುಬೆಟ್ಟು ಕಡೆಗೆ ಪ್ರಯಾಣಿಸಿದ್ದು ಜಕ್ಕು ಡಿಸೋಜ ಅವರ ಮನೆಯ ಅಂಗಳದ ಮೂಲಕ ಮುಂದೆ ಸಾಗಿದೆ. ಸೆವುರಿನ್ ಡಿಸೋಜ ಅವರು ನಾಯಿ ಬೊಗಳುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ಮನೆಯ ಎದುರುಗಡೆ ಇರುವ ದುಲ್ಸೀನ ಡಿಸೋಜ ಅವರ ತೋಟದಿಂದ ಕಾಡಾನೆ ಕಾಡಿನ ಕಡೆ ಪ್ರಯಾಣ ಬೆಳೆಸಿರುವುದು ಕಂಡು ಬಂದಿದೆ. ಆನೆ ಸಂಚರಿಸಿದ ದಾರಿಯಲ್ಲಿನ ತೋಟದಲ್ಲಿ ಕೆಲವು ಬಾಳೆಗಿಡಗಳು ಹಾನಿಗೊಂಡಿವೆ ಹೊರತು ಇನ್ನಾವುದೇ ರೀತಿಯ ಹಾನಿಯುಂಟಾಗಿರುವುದಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here