ಸವಣೂರಿನಲ್ಲಿ ಕರ್ಣಾಟಕ ಬ್ಯಾಂಕ್‌ನ ಸಿಡಿಎಂ ಹಾಗೂ ಎಟಿಎಂ ತೆರೆಯುವಂತೆ ಗ್ರಾ.ಪಂ.ನಿಂದ ಮನವಿ

0

ಸವಣೂರು : ಸವಣೂರಿನಲ್ಲಿ ಕರ್ಣಾಟಕ ಬ್ಯಾಂಕಿನ ಸಿಡಿಎಂ (ಕ್ಯಾಶ್ ಡೆಪಾಸಿಟ್ ಮೆಶಿನ್) ಹಾಗೂ ಎ.ಟಿ.ಎಂ.ತೆರೆಯುವಂತೆ ಸವಣೂರು ಗ್ರಾ.ಪಂ.ವತಿಯಿಂದ ಜೂ.24ರಂದು ಮನವಿ ಸಲ್ಲಿಸಲಾಯಿತು.

 ಸವಣೂರು ಯುವಕ ಮಂಡಲದ ಸಹಯೋಗದಲ್ಲಿ ಸವಣೂರು ಪದ್ಮಾಂಬಾ ಸರ್ವೀಸ್ ಸೆಂಟರ್‌‌ನಲ್ಲಿ ನಡೆದ ಕರ್ಣಾಟಕ ಬ್ಯಾಂಕಿನ ಖಾತೆ ತೆರೆಯುವ ಶಿಬಿರಕ್ಕೆ ಭೇಟಿ ನೀಡಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ಸದಸ್ಯರಾದ ಗಿರಿಶಂಕರ ಸುಲಾಯ, ಬಾಬು ಎನ್ ಅವರು ಕರ್ಣಾಟಕ ಬ್ಯಾಂಕಿನ ಸರ್ವೆ ಶಾಖೆಯ ಪ್ರಬಂಧಕ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸವಣೂರು ಪದ್ಮಾಂಬಾ ಸರ್ವೀಸ್ ಸೆಂಟರ್ ನ ಪಾಲುದಾರ  ಸುರೇಶ್ ರೈ ಸೂಡಿಮುಳ್ಳು, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ.,ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here