ದಿವಾಕರ ಶೆಟ್ಟಿಯವರ ಶೃದ್ದಾಂಜಲಿ ಸಭೆ

0

ಉಪ್ಪಿನಂಗಡಿ: ಆದಿತ್ಯವಾರದಂದು ನಿಧನರಾದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ದಿವಾಕರ ಶೆಟ್ಟಿ ಅವರಿಗೆ ಸಂಘದ ಕೇಂದ್ರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.


ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು ರವರ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಸಹಕಾರಿ ಬ್ಯಾಂಕಿನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ಭಟ್ ,ಸಂಘದ ನಿರ್ದೇಶಕರಾದ ಜಗದೀಶ್ ರಾವ್ ಮಣಿಕ್ಕಳ, ಎನ್. ಕುಂಞ , ಸಿಬ್ಬಂದಿ ಪುಷ್ಪರಾಜ್ ಶೆಟ್ಟಿ ಮಾತನಾಡಿ, ಸಂಘದ ಅಭಿವೃದ್ಧಿಯಲ್ಲಿ ವೇಗೋತ್ಕರ್ಷವನ್ನು ಕಾಣಲು ದಿವಾಕರ ಶೆಟ್ಟಿಯವರ ಕೊಡುಗೆ ಮಹತ್ತರವಾಗಿದೆ. ಸಂಘದ ಹಿತವನ್ನು ಕಾಯುತ್ತಾ, ಸದಸ್ಯರ ಹಿತಕ್ಕೂ ಅವರು ನೀಡುತ್ತಿದ್ದ ಆದ್ಯತೆ ಅವರ ಬಗ್ಗೆ ಇಂದಿಗೂ ಜನ ಉಪಕಾರ ಸ್ಮರಣೆಯಿಂದ ನೆನೆಯುವಂತೆ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಸಿಬ್ಬಂದಿಗಳಾದ ಅಶೋಕ್ ಕುಮಾರ್ ಶೆಟ್ಟಿ, ಶಶಿಧರ ಹೆಗ್ಡೆ, ರವೀಶ್ ಹೆಚ್.ಟಿ. , ಪ್ರವೀಣ್ ಆಳ್ವ, ದೇವರಾಜ್, ಉಮೇಶ್ , ಗಾಯತ್ರಿ, ಚೇತನಾ, ವಸಂತ ಗೌಡ , ವಿಜಯ ಗೌಡ , ಅಕ್ಷಯ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here