ಪುಣ್ಚಪ್ಪಾಡಿ : ಬಿಜೆಪಿ ವತಿಯಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಸಸಿ ನಾಟಿ 

0

ಸವಣೂರು : ಪಾಲ್ತಾಡಿ – ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಪುಣ್ಚಪ್ಪಾಡಿ ಬೂತ್ 68 ಮತ್ತು ಕುಮಾರಮಂಗಲ ಬೂತ್ 69  ಇದರ ಆಶ್ರಯದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿನದ ಅಂಗವಾಗಿ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ಗೌರಿಸದನ ಸಭಾಂಗಣದ ಹೊರ ಭಾಗದಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿ ಯಾಗಿ ಸವಣೂರು ಗ್ರಾ.ಪಂ.ಸದಸ್ಯರಾದ ಗಿರಿ ಶಂಕರ ಸುಲಾಯ ಮಾತನಾಡಿದರು.ಸಮಾರಂಭ ಅಧ್ಯಕ್ಷತೆಯನ್ನು ಬಿಜೆಪಿ ಸವಣೂರು ಮಹಾ ಶಕ್ತಿ ಕೇಂದ್ರ  ತಾರಾನಾಥ ಕಾಯರ್ಗ ವಹಿಸಿದ್ದರು.

ಸಂತೋಷ ರೈ ಕಲಾಯಿ,ಪ್ರಶಾಂತ ಗುಂಡಿಯಡ್ಕ,ವಿಜಯ ಕುಮಾರಮಂಗಲ,ಮೋನಪ್ಪ ನಾಯ್ಕ ಜರಿನಾರು, ತೀರ್ಥನ್ ಬೊಳ್ಳಾಜೆ ಮೊದಲಾದವರು ಉಪಸ್ಥಿತರಿದ್ದರು. ಪಾಲ್ತಾಡಿ ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಸಹ ಪ್ರಮುಖ್ ಮಹೇಶ್ ಕೆ ಸವಣೂರು ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು, ಕಡಬ ತಾ.ಪಂ.ಮಾಜಿ ಅಧ್ಯಕ್ಷೆ  ರಾಜೇಶ್ವರಿ ಕನ್ಯಾಮಂಗಲ ವಂದಿಸಿದರು.

LEAVE A REPLY

Please enter your comment!
Please enter your name here