ಕೈಕಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಮಸ್ತ ವಿತರಣೆ

0

ಕೈಕಾರ: ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಮಸ್ತ ವಿತರಣಾ ಕಾರ್ಯಕ್ರಮವು ಜೂ.26ರಂದು ಕೈಕಾರ ಶಾಲೆಯಲ್ಲಿ ನಡೆಯಿತು.
ದಾನಿಗಳಾಗಿ ವಿಜಯಲಕ್ಷ್ಮಿ ಲೋಕೇಶ್ ರೈ ಬೆಂಗಳೂರು ,ಇವರ ತಾಯಿ ಉಷಾ ರೈ ಅವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಶತಮಾನೋತ್ಸವ ಸಮಿತಿಯ ಸಂಚಾಲಕ ಸೀತಾರಾಮ ರೈ ಕೈಕಾರ, ಪ್ರಕಾಶ್ ಚಂದ್ರ ರೈ ಕೈಕಾರ ಅಧ್ಯಕ್ಷರು ಶತಮಾನೋತ್ಸವ ಸಮಿತಿ ಕೈಕಾರ ,ಚಂದ್ರಹಾಸ ರೈ ಪನಡ್ಕ ಮುಖ್ಯ ಗುರುಗಳಾದ ರಾಮಣ್ಣ ರೈ ಎಲ್‌ಕೆಜಿ, ಯುಕೆಜಿ ಸಂಚಾಲಕಿ ಶಾರದಾ ಶೆಟ್ಟಿ, ಕಿರಣ್ ರೈ ಪುಂಡಿಕಾಯಿ, ಊರಿನ ಗಣ್ಯರು ಪೋಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಜಯಶ್ರೀ ಅವರು ಸ್ವಾಗತಿಸಿ, ರಾಜೇಶ್ವರಿ ಭಟ್ ಅವರು ವಂದಿಸಿದರು. ಶೋಭಾ ಮತ್ತು ಸೂರಜ್ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here