ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ತ್ಯಾಗರಾಜೆ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ಹಸ್ತಾಂತರ

0

ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ವತಿಯಿಂದ ತ್ಯಾಗರಾಜೆ ಅಂಗನವಾಡಿ ಕೇಂದ್ರಕ್ಕೆ ಸುಮಾರು 1,50,000. ರೂ ಮೊತ್ತದಲ್ಲಿ ಸುತ್ತು ಕಂಪೌಂಡ್ ಮತ್ತು ಮಕ್ಕಳಿಗೆ ಆಟದ ಜಾರುಬಂಡಿ ಒದಗಿಸಲಾಗಿದ್ದು ಇಂದು ಅಂಗನವಾಡಿಗೆ ಹಸ್ತಾಂತರಿಸಲಾಯಿತು.

ರೋಟರಿ ಜಿಲ್ಲೆ 3181ರ ಈ ವರ್ಷದ ಜಿಲ್ಲಾ ಅಂಗನವಾಡಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈ ಕಾಮಗಾರಿ ನಡೆಸಲಾಗಿತ್ತು. ಹಸ್ತಾಂತರ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೊ. ಬುಡಿಯಾರ್ ರಾಧಾಕೃಷ್ಣ ರೈ, ಡಿ ಆರ್ ಎಫ್ ಸಿ ಡಾ. ಸೂರ್ಯನಾರಾಯಣ, ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್, ಅಂಗನವಾಡಿ ಮೇಲ್ವಿಚಾರಕಿ ಆರತಿ, ಅಂಗನವಾಡಿ ಕಾರ್ಯಕರ್ತೆ ತಾರಾ ಬಲ್ಲಾಳ್, ಕಾಂಟ್ರಾಕ್ಟರ್ ರೊ. ಶರತ್ ಗೌಡ, ಮಕ್ಕಳ ಪೋಷಕರು, ಪುಟಾಣಿ ಮಕ್ಕಳು ಸೇರಿದಂತೆ ರೋಟ್ರಾಕ್ಟ್ ತಿಂಗಳಾಡಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here