ಆತೂರಿನಲ್ಲಿ ಸಮಸ್ತ ಸ್ಥಾಪನೆ ದಿನಾಚರಣೆ

0

ಆತೂರು : ಬದ್ರಿಯಾ ಜುಮಾ ಮಸೀದಿ ಆತೂರು, SKSSF ಆತೂರು ಶಾಖೆ ಹಾಗು ಎಸ್ ಕೆ ಎಸ್ ಬಿ ವಿ ಆತೂರು ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಸಮಸ್ತ 99ನೇ ಸ್ಥಾಪನೆ ದಿನಾಚರಣೆಯನ್ನು ಆತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಆತೂರು ಶಾಖೆ ಅಧ್ಯಕ್ಷರಾದ ಬಿ ಕೆ ಅಬ್ದುಲ್ ರಝಕ್ ವಹಿಸಿದರು. ಬದ್ರಿಯಾ ಜುಮಾ ಮಸೀದಿ ಆತೂರು ಅಧ್ಯಕ್ಷರಾದ ಅಹಮದ್ ಕುಂಞಿ ಎಚ್ ಧ್ವಜಾರೋಹಣ ಮಾಡಿದರು. ಮದರಸ ಸದರ್ ಉಸ್ತಾದ್ ಸತ್ತಾರ್ ಉಸ್ತಾದ್ ದುಆಗೆ ನೇತೃತ್ವ ನೀಡಿದರು. ಉಸ್ತಾದ್ ಅಬು ಉವೈಸ್ ಕಡಬ ಸಂದೇಶ ಭಾಷಣ ಮಾಡಿದರು. ಸಮಸ್ತದ ಹಿರಿಯ ವ್ಯಕ್ತಿ ಅಬೂಬಕ್ಕರ್ ಹಾಜಿ ಕಲಾಯಿರವರನ್ನು ಸ್ಥಾಪನೆ ದಿನದ ಪ್ರಯುಕ್ತ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ SKSSF ಶಾಖೆ ನಾಯಕರಾದ ಬಿ ಅರ್ ಅಬ್ದುಲ್ ಖಾದರ್, ಸಿರಾಜ್ ಬಡ್ಡಮೆ, ನಾಸಿರ್ ಮರೋಡಿ, ಎ ಎಂ ಅಬ್ದುಲ್ ಖಾದರ್, ಹಮೀದ್ ಎನ್ ಎ ಅರ್, ಕಾರ್ಯಕರ್ತರಾದ ಶರೀಫ್ ಮರೋಡಿ, ಅಬ್ಬಾಸ್ ಮರೋಡಿ, ಅಬ್ದುಲ್ ರಝಕ್ ಮರೋಡಿ, ಜಮಾಹತಿನ ಆಡಳಿತ ಸಮಿತಿಯ ಸದಸ್ಯರು, ಜಮಾಹತಿನ ನೇತಾರರು, ಜಮಾಹತರು, ಎಸ್ ಕೆ ಎಸ್ ಬಿ ವಿ ವಿದ್ಯಾರ್ಥಿಗಳು ಹಾಗು ಎಸ್ ಕೆ ಎಸ್ ಎಸ್ ಎಫ್ ಶಾಖೆ ಸಮಿತಿಯ ನಾಯಕರು ಉಪಸ್ಥಿತರಿದ್ದರು. SKSSF ಅತೂರು ಶಾಖೆ ಕಾರ್ಯದರ್ಶಿ ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here