ಅಧ್ಯಾಪಕ, ಲೇಖಕ ನರೇಂದ್ರ ರೈ ದೇರ್ಲರಿಂದ ಕೆಯ್ಯೂರು ಗ್ರಾ.ಪಂ. ಗ್ರಂಥಾಲಯಕ್ಕೆ 550 ಸಾಹಿತ್ಯ ಕೃತಿಗಳ ಕೊಡುಗೆ 

0

ಪುತ್ತೂರು: ತನ್ನ ಹುಟ್ಟೂರು ಕೆಯ್ಯೂರಿನ ಗ್ರಾಮ ಪಂಚಾಯತ್ ಇತ್ತೀಚಿಗೆ ಆರಂಭಿಸಿದ್ದ ನೂತನ ಗ್ರಂಥಾಲಯಕ್ಕೆ ಆಧ್ಯಾಪಕ ಲೇಖಕ ಕೃಷಿಕ ನರೇಂದ್ರ ರೈ ದೇರ್ಲ ಅವರು ತನ್ನ ಸಂಗ್ರಹದಲ್ಲಿದ್ದ ಸುಮಾರು 550 ಕನ್ನಡ ಸಾಹಿತ್ಯದ ಬಹು ಪ್ರಕಾರದ ಕೃತಿಗಳನ್ನು ಉದಾರವಾಗಿ ನೀಡಿದರು.

ಹಾಗೆ ತಾನು ಓದಿದ ಕೆಯ್ಯೂರು ಶಾಲೆಗೂ ಮುಂದಿನ ವಾರ ಸುಮಾರು 200 ಪುಸ್ತಕಗಳನ್ನು ನೀಡಲಿರುವ ದೇರ್ಲ ಅವರು ಇತ್ತೀಚಿಗಷ್ಟೇ ತಾನು ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿಗೂ ತನ್ನ ಸಂಗ್ರಹದಲ್ಲಿದ್ದ ಸುಮಾರು ಒಂದು ಸಾವಿರದಷ್ಟು ಪುಸ್ತಕಗಳನ್ನು ನೀಡಿದ್ದರು. ಕೆಯ್ಯೂರು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶರತ್ ಕುಮಾರ್, ಸದಸ್ಯರಾದ ಬಟ್ಯಪ್ಪ ರೈ, ಗ್ರಂಥ ಪಾಲಕಿ ಅನುಷಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪುಸ್ತಕವನ್ನು ಪಡೆದರು.

LEAVE A REPLY

Please enter your comment!
Please enter your name here