ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಹೊನ್ನಪ್ಪ ಗೌಡ ನಿಧನ

0

ಪುತ್ತೂರು: ಇಲ್ಲಿನ ಮಂಜಲ್ಪಡ್ಪು ಸಿಂಗಾನಿ ನಿವಾಸಿ ಹೊನ್ನಪ್ಪ ಗೌಡ (87ವ)ರವರು ಹೃದಯಾಘಾತದಿಂದ ಜೂ.27ರಂದು ಪುತ್ತೂರು ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಹಲವು ವರ್ಷ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂಲತಃ ಸುಳ್ಯ ತಾಲೂಕಿನ ವಾಳ್ತಾಜೆಯವರಾದ ಇವರು ಪುತ್ರ ಉದ್ಯಮಿ ಚೇತನ್, ಪುತ್ರಿ ಪುತ್ತೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕಿ ಊರ್ಮಿಳಾರವರನ್ನು ಅಗಲಿದ್ದಾರೆ. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕರು ಸೇರಿದಂತೆ ಹಲವಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here