ಜೂ.30: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾರಾಟ ಸಹಾಯಕ ಉಮೇಶ್ ಬಿ. ಸೇವಾ ನಿವೃತ್ತಿ

0

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಪಾಲ್ತಾಡಿ ಶಾಖೆಯಲ್ಲಿ ಮಾರಾಟ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ್ ಬಿ.ರವರು ಜೂ.30 ರಂದು ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಇವರು ಪಾಲ್ತಾಡಿ ಶಾಖೆಯಲ್ಲಿ 20.10.1989 ರಂದು ತಾತ್ಕಾಲಿಕವಾಗಿ ಸೇವೆಗೆ ಸೇರ್ಪಡೆಗೊಂಡು 18.06.1994 ರಿಂದ ಮಾರಾಟ ಸಹಾಯಕ ಹುದ್ದೆಯನ್ನು ಅಲಂಕರಿಸಿದ ಇವರು ಒಟ್ಟು 35 ವರ್ಷಗಳ ದಕ್ಷ, ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿಯಾಗಿದ್ದು ಪತ್ನಿ ಧರ್ಮಾವತಿ, ಪುತ್ರಿಯರಾದ ಧನ್ಯಶ್ರೀ, ನಿರೀಕ್ಷಾ, ಅದಿತಿರವರೊಂದಿಗೆ ಬಂಬಿಲದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here