ರೆಂಜಿಲಾಡಿ: ಉಚಿತ ಜೇನು ಕೃಷಿ ತರಬೇತಿ ಶಿಬಿರ ಉದ್ಘಾಟನೆ

0

ಕಡಬ: ರೆಂಜಿಲಾಡಿ ಗ್ರಾಮದ ಪೇರಡ್ಕ ರಬ್ಬರ್ ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಉಚಿತ ಜೇನು ಕೃಷಿ ತರಬೇತಿ ಶಿಬಿರವು ಜೂ.25ರಂದು ಉದ್ಘಾಟನೆಗೊಂಡಿತು. ಶಿಬಿರವನ್ನು ತರಬೇತಿ ಶಿಬಿರದ ಎಡಿಒ ದೀಪ್ತಿ ಸಿ.ವಿ ಇವರು ಉದ್ಘಾಟಿಸಿ ಶಿಬಿರದ ಮಾಹಿತಿ ನೀಡಿದರು.


ಸಭೆಯ ಅಧ್ಯಕ್ಷತೆಯನ್ನು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ವರ್ಗೀಸ್ ವಿ.ಕೆ. ವಹಿಸಿದ್ದರು. ವೇದಿಕೆಯಲ್ಲಿ ತರಬೇತಿ ಅಧಿಕಾರಿ ಅನೂಪ್ ಬೇಬಿ ಉಪಸ್ಥಿತರಿದ್ದರು. ಪೇರಡ್ಕ ರಬ್ಬರ್ ಉತ್ಪಾದಕರ ಸಂಘದ ಕಲೆಕ್ಷನ್ ಏಜೆಂಟ್ ಇಮ್ಯಾನುವೇಲ್ ಅವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here