ಪುತ್ತೂರು:ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೃದಯಘಾತದಿಂದ ನಿಧನ

0

ಪುತ್ತೂರು: ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪುತ್ತೂರು ತಲುಪುತ್ತಿದ್ದಂತೆ ಅದರಲ್ಲಿದ್ದ ಮೈಸೂರಿನ ಪ್ರಯಾಣಿಕರೊಬ್ಬರು ಹೃದಯಾಘಾತಗೊಂಡು ಮೃತಪಟ್ಟ ಘಟನೆ ಜೂ.28ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.


ಮೈಸೂರು ಹಂಚ್ಯಾ ಅಂಚೆಯ ಮಾನಸಿ ನಗರ ನಿವಾಸಿ ಮಂಜುನಾಥ(57ವ)ರವರು ಹೃದಯಾಘಾತದಿಂದ ಮೃತಪಟ್ಟವರು. ಅವರು ಕಳೆದ ಎಂಟತ್ತೂ ವರ್ಷಗಳಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 2 ದಿನ ದಾಖಲಾಗಿದ್ದರು. ಅಲ್ಲಿ ಚೇತರಿಕೆಗೊಂಡ ಬಳಿಕ ಅವರು ಜೂ. 28ರಂದು ಮಂಗಳೂರಿನಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಪುತ್ತೂರಿಗೆ ಸಂಜೆ ತಲುಪುತ್ತಿದ್ದಂತೆ ಅವರು ಅನಾರೋಗ್ಯದಿಂದ ಪ್ರಜ್ಞಾಹೀನರಾದರು. ತಕ್ಷಣ ಅವರನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಮತ್ತು ಇತರರು ಸೇರಿಕೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷೆಗೊಳಪಡಿಸಿ ಮಂಜುನಾಥ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮೃತರ ಪತ್ನಿ ಶಾಲಿನಿ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here