ವಿಠಲ ಸುಪ್ರಜಿತ್ ಖಾಸಗಿ ಐಟಿಐ, ರೋಟರಿ ಕ್ಲಬ್ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

0

ವಿಟ್ಲ: ವಿಠಲ ಸುಪ್ರಜಿತ್ ಖಾಸಗಿ ಐಟಿಐ ಹಾಗೂ ರೋಟರಿ ಕ್ಲಬ್ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ನಡೆಯಿತು.


ರೋಟರಿ ಕ್ಲಬ್ ಅಧ್ಯಕ್ಷರಾದ ಹರೀಶ್ ಪೂಜಾರಿಯವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸುಪ್ರಜಿತ್ ಐಟಿಐ ಯ ಸಂಚಾಲಕರಾದ ಅಲ್ಫಾನ್ಸ್ ಸಿಲ್ವಸ್ಟರ್ ಮಸ್ಕರೇನ್ಹಸ್, ಡಾ. ವಿ ಕೆ ಹೆಗ್ಡೆ, ಜಯರಾಮ್ ರೈ, ಡಾ. ಚರಣ್ ಕಜೆ, ಭಾಸ್ಕರ ಶೆಟ್ಟಿ, ಧನಂಜಯ, ದಿನೇಶ್ ಕುಮಾರ್, ಪಿ ಕೆ ಶೆಟ್ಟಿ, ಸಂಜೀವ ಪೂಜಾರಿ, ದಾಸಪ್ಪ ಪೂಜಾರಿ, ಕ್ಲಿಫರ್ಡ್ ವೇಗಸ್, ಕಿರಣ್ ಕುಮಾರ್ ಮತ್ತು ಪ್ರಕಾಶ್ ನಾಯಕ್, ಆದರ್ಶ ಚೊಕ್ಕಾಡಿ, ಅಲ್ಫಾನ್ಸ್ ವೇಗಸ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಕೃಪಾ ಪ್ರಾರ್ಥಿಸಿದರು. ವಿಠಲ ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿಯವರು 34ನೇ ಬಾರಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೋಮಶೇಖರ್ ವಂದಿಸಿದರು. ಅಣ್ಣಪ್ಪ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 34 ಯೂನಿಟ್ ರಕ್ತ ಸಂಗ್ರಹವಾಯಿತು.

LEAVE A REPLY

Please enter your comment!
Please enter your name here