ಬೆಟ್ಟಂಪಾಡಿ: ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ಮುಹೂರ್ತ

0

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ. 7, 8 ರಂದು ನಡೆಯುವ 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶ ಸ್ವಾಮಿಯ ವಿಗ್ರಹದ ಮುಹೂರ್ತವು ಜೂ. 29 ರಂದು ಪರ್ಲಡ್ಕದಲ್ಲಿ ನೆರವೇರಿತು.


ವಿಗ್ರಹ ಶಿಲ್ಪಿ ತಾರನಾಥ ಆಚಾರ್ಯ ವಿಧಿವಿಧಾನ ನೆರವೇರಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಅಧ್ಯಕ್ಷ ಉಮೇಶ್ ಮಿತ್ತಡ್ಕ, ಕಾರ್ಯದರ್ಶಿ ಜಯರಾಮ ರೈ ಮೂರ್ಕಾಜೆ, ನಿಕಟಪೂರ್ವ ಅಧ್ಯಕ್ಷರುಗಳಾದ ಪ್ರಭಾಕರ ರೈ ಬಾಜುವಳ್ಳಿ, ಸೀತಾರಾಮ ಗೌಡ ಮಿತ್ತಡ್ಕ, ದುರ್ಗಾಪ್ರಸಾದ್ ಜೆ., ಧನಂಜಯ ರೆಂಜ, ಶಿವಪ್ರಸಾದ್ ತಲೆಪ್ಪಾಡಿ, ಗಣೇಶ ಹೊಳ್ಳ, ಮಹೇಶ್ ಕೋರ್ಮಂಡ, ನಾಗರಾಜ್ ಕಜೆ, ಧೀರಜ್ ಆರ್ಲಪದವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here