ಪುತ್ತೂರು: ಹಳೆ ವೈಷಮ್ಯದಿಂದ ಹಲ್ಲೆ ಆರೋಪ-ದೂರು ದಾಖಲು

0

ಪುತ್ತೂರು:ತನ್ನ ಮೇಲೆ ಹಳೆ ವೈಷಮ್ಯದ ಕಾರಣಕ್ಕಾಗಿ ತಂಡವೊಂದು ಹಲ್ಲೆ ನಡೆಸಿದೆ ಎಂದು ಒಳಮೊಗ್ರು ಉಳಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಜೂ. 30 ರಂದು ರಾತ್ರಿ ಇಬ್ರಾಹಿಂ ಕಲೀಲ್ ರವರ ಸ್ಕೂಟರಿನಲ್ಲಿ, ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಎಂಬಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರನ್ನು ನಾಶೀರ್, ಇರ್ಷಾದ್, ಸಫ್ಘಾನ್, ಮುಸ್ತಾಫ, ರಶೀದ್, ಜಾಫರ್, ಕಬೀರ್ ಮತ್ತು ನಾಶೀರ್ ಎಂಬವರು ತಡೆದು ನಿಲ್ಲಿಸಿ, ಬೈದು, ದೂಡಿ ಹಾಕಿರುತ್ತಾರೆ. ಬಳಿಕ ಎಲ್ಲರು ಗುಂಪು ಸೇರಿ ಹಲ್ಲೆ ನಡೆಸಿದ್ದು, ಹಲ್ಲೆಗೆ ಹಳೆಯ ವೈಷಮ್ಯ ಕಾರಣವೆಂದು ತಿಳಿಸಿದ್ದಾರೆ. ಈ ಕುರಿತು ನಾಶೀರ್, ಇರ್ಷಾದ್, ಸಫ್ಘಾನ್, ಮುಸ್ತಫಾ, ರಶೀದ್, ಜಾಫರ್, ಕಬೀರ್, ನಾಶೀರ್ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here