ಅರಿಯಡ್ಕ ಗ್ರಾಮದ ಶಾಂತಿಮೂಲೆಯಲ್ಲಿ ಮನೆ ಗೋಡೆ ಬಿದ್ದು ಹಾನಿ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಶಾಂತಿಮೂಲೆ ಈಶ್ವರ ನಾಯ್ಕ ರವರ ಪತ್ನಿ ಕಮಲರವರ ಮನೆ ವಿಪರೀತ ಮಳೆಯಿಂದ ಮನೆ ಗೋಡೆ ಬಿದ್ದು ಹಾನಿ ಸಂಭವಿಸಿದೆ.ತೀರಾ ಬಡತನ ದಿಂದ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಸಂಕಷ್ಟದಲ್ಲಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ನಿಂದ ಕಳೆದ ಅವಧಿಯಲ್ಲಿ ಮನೆ ರಿಪೇರಿಗೆ ಹಣ ಬಿಡುಗಡೆ ಮಾಡಿದರೂ ಮನೆ ರಿಪೇರಿ ಮಾಡಿರಲಿಲ್ಲ.ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಧ್ಯ ಪಂಚಾಯತ್ ವತಿಯಿಂದ ಟಾರ್ಪಲ್ ಹಾಕಿ ಕೊಡಲಾಗಿದೆ.ಗ್ರಾಮ ಲೆಕ್ಕಿಗ ಗೋಪಿನಾಥ್ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ , ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು,ಪಿ.ಡಿ.ಓ ಸುನಿಲ್ ಕುಮಾರ್, ಮಾಹಿತಿ ನೀಡಿದರು.


ಕಾರ್ಯದರ್ಶಿ ಶಿವರಾಮ ಮೂಲ್ಯ, ಸಚಿನ್ ಪಾಪೆಮಜಲು, ಚೆನ್ನಪ್ಪ ನಾಯ್ಕ ಶಾಂತಿ ಮೂಲೆ, ನಿತಿನ್ ಶೆಟ್ಟಿ ಹೊಸಗದ್ದೆ,ರಕ್ಷಿತ್ ಪಾದೆಲಾಡಿ, ಚಂದ್ರ ಪಾದೆಲಾಡಿ ಚಿರಂಜೀವಿ ಪಾದೆಲಾಡಿ, ಆಶಾ ಕಾರ್ಯಕರ್ತೆ ವೇದಾವತಿ, ಮಕ್ಕಳ ರಕ್ಷಣಾ ಸಮಿತಿಯ ಕಸ್ತೂರಿ, ಆರೋಗ್ಯ ಸಂರಕ್ಷಣಾಧಿಕಾರಿ ಚೇತನ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here