ವೈದ್ಯರ ದಿನಾಚರಣೆ ಪ್ರಯುಕ್ತ ರೋಟರಿ ಪುತ್ತೂರುನಿಂದ ಕ್ಲಬ್‌ನಲ್ಲಿನ ವೈದ್ಯರುಗಳಿಗೆ ಗೌರವಾರ್ಪಣೆ

0

ಪುತ್ತೂರು: ಜುಲೈ ಒಂದರಂದು ಆಚರಿಸಲ್ಪಡುವ ವೈದ್ಯರ ದಿನಾಚರಣೆ ಪ್ರಯುಕ್ತ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಪ್ರಗತಿ ಆಸ್ಪತ್ರೆಯ ಸಭಾಂಗಣದಲ್ಲಿ ಕ್ಲಬ್‌ನಲ್ಲಿನ ಸದಸ್ಯ ವೈದ್ಯರುಗಳಿಗೆ ಸನ್ಮಾನಿಸಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.


ಕ್ಲಬ್‌ನ ವೈದ್ಯ ಸದಸ್ಯರುಗಳಾದ ಪಿಡಿಜಿ ಡಾ.ಭಾಸ್ಕರ್ ಎಸ್, ಡಾ.ಅಶೋಕ್ ಪಡಿವಾಳ್, ಡಾ.ಎಂ.ಎಸ್ ಭಟ್, ಡಾ.ಶ್ರೀಪತಿ ರಾವ್, ಡಾ.ಸುಧಾ ಎಸ್.ರಾವ್, ಡಾ.ಶ್ರೀಕಾಂತ್ ರಾವ್, ಡಾ.ಗೋಪಿನಾಥ್ ಪೈ, ಡಾ.ನಝೀರ್ ಅಹಮ್ಮದ್, ಡಾ.ಶ್ರೀಪ್ರಕಾಶ್ ಬಿ, ಡಾ.ಜೈದೀಪ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಕ್ಲಬ್ ಸದಸ್ಯ ಚಿದಾನಂದ ಬೈಲಾಡಿರವರು ಸಮಾಜದಲ್ಲಿ ಜೀವ ರಕ್ಷಕರೆನಿಸಿದ ವೈದ್ಯರುಗಳ ಸೇವೆಯನ್ನು ಶ್ಲಾಘಿಸುವ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಪಿಡಿಜಿ ಡಾ.ಭಾಸ್ಕರ್ ಎಸ್.ರವರು ವೈದ್ಯರ ದಿನಾಚರಣೆಯ ದಿನದಂದು ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಉಪಸ್ಥಿತರಿದ್ದರು. ಪ್ರೀತಾ ಹೆಗ್ಡೆ ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ದಾಮೋದರ್ ಕೆ ವಂದಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here