ಕೆಯ್ಯೂರು: ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ, ಕೆಯ್ಯೂರು ದೇವಳದಲ್ಲಿ ಸ್ವಚ್ಛತೆ

0

ಪುತ್ತೂರು: ಒಡಿಯೂರು ಶ್ರೀಗಳ 63ನೇ ಜನ್ಮ ದಿನೋತ್ಸವದ ಅಂಗವಾಗಿ ಕೆಯ್ಯೂರು ವಿಕಾಸವಾಹಿನಿ ಸ್ವಸಹಾಯ ಸಂಘದ ಸದಸ್ಯರಿಂದ ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ವಿಕಾಸ ವಾಹಿನಿ ಸಂಘದ ಸದಸ್ಯರು ಹಾಗೂ ಕೆಯ್ಯೂರು ಕೆದಂಬಾಡಿ ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಪುತ್ತೂರು ವಲಯ ಸಂಯೋಜಕಿ ಶಶಿ ಡಿ, ಕೆದಂಬಾಡಿ ಗ್ರಾಮ ಸೇವಾ ದೀಕ್ಷಿತೆ ಶುತಿ ಜೀವನ್, ಕೆಯ್ಯೂರು ಗ್ರಾಮದ ಸೇವಾದೀಕ್ಷಿತೆ ಸೀತಾ ಕೆ.ವಿ ಹಾಗೂ ದೇವಸ್ಥಾನದ ಸಿಬ್ಬಂದಿಗಳಾದ ಚಂದ್ರಶೇಖರ, ಗಣೇಶ್,ಆನಂದ ಸಹಕರಿಸಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಸುಮಾರು 32 ಮಂದಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here