ಪಾಪೆಮಜಲು ಪ್ರೌಢಶಾಲೆಗೆ ದಾನಿಗಳಿಂದ ಅಡುಗೆ ಪರಿಕರಗಳ ಕೊಡುಗೆ

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಪರಿಕರಗಳ ಅವಶ್ಯಕತೆ ಹಿನ್ನೆಲೆಯಲ್ಲಿ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅವರ ಕೋರಿಕೆಯ ಮೇರೆಗೆ ದಾನಿಗಳಾದ ಅಶೋಕ್ ಕುಮಾರ್ ರೈ ದೇರ್ಲ, ಗಣಪ ಕನ್ನಯ ಹಾಗೂ ಶ್ರೀನಿವಾಸ ಗೌಡ ಕನ್ನಯ ಇವರ ಸಹಕಾರದಿಂದ ರೂ.11,000 ಮೊತ್ತದ ಪಾತ್ರೆಗಳನ್ನು ಶಾಲೆಗೆ ಕೊಡುಗೆ ನೀಡಿದರು.
ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಹಾಗೂ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಪಾತ್ರೆಗಳನ್ನು ಸ್ವೀಕರಿಸಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here