ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ

0

ಪುತ್ತೂರು: 2023-24ನೇ ಸಾಲಿನ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆಗೊಂಡಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್‌ ಚೆಂದು ಕೂಡ್ಲು, ಮನೋಜ್‌ ಕುಮಾರ್‌ ರೈ ವೇರಾಲು ಮತ್ತು ಸತೀಶ್‌ ರೈ ಕಟ್ಟಾವು ಇವರ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.

ಗೌರವಧ್ಯಕ್ಷರಾಗಿ ಕಟ್ಟಾವು ಸುಧಾ ಎಸ್‌ ರೈ, ಅಧ್ಯಕ್ಷೆಯಾಗಿ ಸವಿತಾ ಗೆಜ್ಜೆಗಿರಿ, ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕಿ ಶಂಕರಿ ಕೆ, ಉಪಾಧ್ಯಕ್ಷೆಯಾಗಿ ಸುನೀತಾ ಮೇಗಿನಮನೆ, ಜತೆಕಾರ್ಯದರ್ಶಿಯಾಗಿ ಸುಲೋಚನಾ ನೇರ್ಲಂಪಾಡಿ, ಕೋಶಾಧಿಕಾರಿಯಾಗಿ ಬಡಗನ್ನೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷೆ ಕೆ.ಶ್ರೀಮತಿ ಆಯ್ಕೆಯಾದರು.

ಸದಸ್ಯರಾಗಿ ಪ್ರೇಮಾ ಮೈಂದನಡ್ಕ, ಪ್ರೇಮಲತಾ ಮೈಂದನಡ್ಕ, ಕವಿತಾ,ಪಾರಿಜಾತ ಉಳಯ, ಸುಧಾ, ಸುಶೀಲಾ ಪಕ್ಯೋಡು,ಬಾಗೀರಥಿ ಸುಳ್ಯಪದವು, ಪ್ರೇಮ ಅಬಿಲೆ, ಭಾರತಿ ಕುದ್ಕಾಡಿ, ಸುಜಾತಾ ಮೈಂದಡ್ಕ, ರೇಖಾ ಪಟ್ಟೆ, ಯಶೋದಾ, ಶೋಭಾ ನೆರೆಮಜಲು, ರೇವತಿ ಕೋಡ್ಯಡ್ಕ, ಪ್ರೇಮ ಮೈಂದನಡ್ಕ, ಮಲ್ಲಿಕಾ ಕೋಡ್ಯಡ್ಕ, ಭವ್ಯಾ ವಿನೋದ್‌ ಮೈಂದನಡ್ಕ, ಸೀತಾ, ಗಿರಿಜಾ ಬದಿನಾರು ಆಯ್ಕೆಗೊಂಡರು.ನಿವೃತ್ತ ಮುಖ್ಯಗುರು ನಾರಾಯಣ ಪಾಟಾಳಿ ಪಟ್ಟೆ,ಪುರಂದರ ರೈ ನೆರೆಮಜಲು, ಉತ್ತಮ ಪಡ್ಪು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here