ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ – ಕುಂಬ್ಳೆ ಶ್ರೀಧರ್ ರಾವ್‌ಗೆ ನುಡಿನಮನ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಜು.8ರಂದು ನಡೆದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆಯಲ್ಲಿ ಯಕ್ಷಗಾನ ಖ್ಯಾತ ವೇಷಧಾರಿ ಕುಂಬ್ಳೆ ಶ್ರೀಧರ್ ರಾವ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.


ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರಾದ , ಪೂಕಳ ಲಕ್ಷ್ಮೀನಾರಾಯಣ ಭಟ್ , ಪಕಳಕುಂಜ ಶ್ಯಾಮ್ ಭಟ್ ,ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ , ದುಗ್ಗಪ್ಪ ಯನ್ , ಶುಭಾ ಜೆ.ಸಿ.ಅಡಿಗ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷ ಪ್ರೇಮಲತಾ ಟಿ ರಾವ್ ಮಾತಾಡಿ ನುಡಿನಮನ ಸಲ್ಲಿಸಿದರು ದೇವಳದ ಅರ್ಚಕ ಹರೀಶ್ ಭಟ್, ಪದ್ಮನಾಭ, ಗಣೇಶ್ ಕೇಕುಣ್ಣಾಯ, ಟಿ ರಂಗನಾಥ ರಾವ್ ಪದ್ಯಾಣ ಶಂಕರನಾರಾಯಣ ಭಟ್ , ಆನಂದ ಸವಣೂರು , ಯಲ್ ಯನ್ ಭಟ್ , ಮುರಳೀಧರ ಕಲ್ಲೂರಾಯ ನಿತೀಶ್ ಈಶ್ವರಮಂಗಲ ಮೊದಲಾದವರು ಉಪಸ್ಥಿತಿತರಿದ್ದರು. ಬಳಿಕ ” ಭಕ್ತ ಸುಧನ್ವ ” ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here