ಕೊಳ್ತಿಗೆ ವರ್ತಕ ಸಂಘದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಹರಿಪ್ರಸಾದ್ ಕುಂಟಿಕಾನ , ಕಾರ್ಯದರ್ಶಿ: ಮೋಹನ್ ಆಳ್ವ, ಕೋಶಾಧಿಕಾರಿ: ಪುರುಷೋತ್ತಮ


ಪುತ್ತೂರು : ವರ್ತಕ ಸಂಘ ಕೊಳ್ತಿಗೆ ಇದರ ಮಹಾಸಭೆಯನ್ನು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ಜು.07 ರಂದು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವರ್ತಕ ಸಂಘದ ಅಧ್ಯಕ್ಷ ವೆಂಕಟರಮಣ. ಪಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಸಿ. ಎ. ಬ್ಯಾಂಕಿನ ಅಧ್ಯಕ್ಷ ಕೆ. ಎಸ್. ವೆಂಕಟರಮಣ, ಕೊಳ್ತಿಗೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಪ್ರಮೋದ್ ಕೆ. ಸ್. ಆಗಮಿಸಿದ್ದರು. ಸಂಘದ ಕೋಶಾಧಿಕಾರಿ ಹರಿಪ್ರಸಾದ್ ಕುಂಟಿಕಾನ ಸ್ವಾಗತಿಸಿದರು.

ಕಾರ್ಯದರ್ಶಿ ಪ್ರಭಾಕರ ರೈ ಕೊರಂಬಡ್ಕ ವರದಿ ಮಾಡಿದರು. 2024-25 ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಸಾದ್ ಜನರಲ್ ಸ್ಟೋರ್ ಮಾಲಕ ಹರಿ ಪ್ರಸಾದ್ ಕುಂಟಿಕಾನ, ಕಾರ್ಯದರ್ಶಿಯಾಗಿ ಶ್ರೀ ದೇವಿ ಜನರಲ್ ಸ್ಟೋರ್ ಮಾಲಕ ಮೋಹನ್ ಆಳ್ವ, ಖಜಾಂಚಿಯಾಗಿ ಶ್ರೀ ಷಣ್ಮುಖ ಜನರಲ್ ಸ್ಟೋರ್ ಮಾಲಕ ಪುರುಷೋತ್ತಮ್ ಬಾಯಂಬಾಡಿರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರುಗಳಾಗಿ ರಜಾಕ್ ಮುಳ್ಳುಕಾಡು, ತೇಜ ಕುಮಾರ್ ಕುಂಟಿಕಾನ, ಪ್ರದೀಪ್ ರೈ ಪಾಂಬಾರು, ಇದ್ದುಕುಂಞ ಪೆರ್ಲಂಪಾಡಿ, ನಿತಿನ್ ಕೊರಂಬಡ್ಕ, ಅಶೋಕ್ ಪಕ್ಕಳ ಕೊರಂಬಡ್ಕ ಬೀಡು, ನಿತಿನ್ ಕುಮಾರ್ ಗುಂಡಿಮಜಲುರುಗಳನ್ನು ಮಾಡಲಾಯಿತು. ಪತ್ರಿಕಾ ಪ್ರತಿನಿಧಿಯಾಗಿ ವೀರಪ್ಪ ಗೌಡ ಪೆರ್ಲಂಪಾಡಿರವರನ್ನು ಸೂಚಿಸಲಾಯಿತು. ವರ್ತಕರಾದ ಮೋಹನ್ ಆಳ್ವ, ಜಯಂತ್ ಗೌಡ, ಪ್ರದೀಪ್ ಪಾಂಬಾರು, ಉಮ್ಮರ್ ಶಾಫಿ ಅಥಿತಿಗಳಿಗೆ ಹೂ ಗುಚ್ಚ ನೀಡಿ ಗೌರವಿದರು. ಉಪಾಧ್ಯಕ್ಷ ರವಿ ಪ್ರಸಾದ್ ಕುದ್ಕುಳಿ ವಂದಿಸಿದರು. ಪ್ರಭಾಕರ್ ರೈ ಕೊರಂಬಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here