ಜು.15: ಸುಳ್ಯದಲ್ಲಿ ಮಾನಸ ಗಂಗಾ ಸಹಕಾರ ಸಂಘದ 5 ನೇ ಶಾಖೆಯ ಉದ್ಘಾಟನೆ

0

ವಿಟ್ಲ: ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಡ್ಕಾರ್ ಆರ್ಕೇಡ್ ನಲ್ಲಿ ಪುತ್ತೂರಿನಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಮಾನಸ ಗಂಗಾ ಸಹಕಾರ ಸಂಘದ 5 ನೇ ಶಾಖೆಯು ಜು.15 ರಂದು ಉದ್ಘಾಟನೆಗೊಳ್ಳಲಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾನಸ ಗಂಗಾ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಲತಾ ಕೆ.ವಿ ಯವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಹಕಾರ ಸಂಘದ ಉಪನಿಬಂಧಕ ಹೆಚ್.ಎನ್.ರಮೇಶ್, ಎ.ಒ.ಎಲ್.ಇ.ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಸುಳ್ಯ ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅಡ್ಕಾರ್ ಆರ್ಕೇಡ್ ಮಾಲಕ ದಿನೇಶ್ ಅಡ್ಕಾರ್ ಉಪಸ್ಥಿತರಿರಲಿದ್ದಾರೆ.

ಮಾನಸ ಗಂಗಾ ಸಹಕಾರ ಸಂಘವು ಕಳೆದ 7 ವರ್ಷಗಳಿಂದ ಪುತ್ತೂರಿನ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿದ್ದು, ಉಪ್ಪಿನಂಗಡಿ, ಈಶ್ವರಮಂಗಲ, ದರ್ಬೆಯಲ್ಲಿ ಎಂಜಿಎಸ್ ಆಗ್ರೋ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಇದೀಗ 5 ನೇ ಶಾಖೆ ಸುಳ್ಯದಲ್ಲಿ ಆರಂಭಿಸಲಿದೆ ಎಂದು ಸಂಘದ ಪಿ.ಆರ್.ಒ. ವಿಜಯಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here