ಹಿರಿಯ ಸ್ವರ್ಣೋದ್ಯಮಿಯಾಗಿದ್ದ ಭಾಸ್ಕರ್ ಭಟ್‌ರವರಿಗೆ ಜ್ಯುವೆಲ್ಲರ‍್ಸ್ ಅಸೋಸಿಯೇಶನ್ ವತಿಯಿಂದ ಶ್ರದ್ಧಾಂಜಲಿ

0

ಪುತ್ತೂರು: ಪುತ್ತೂರು ಕೋರ್ಟ್ ರಸ್ತೆ ವಾಸುದೇವ ಭಟ್ ಜ್ಯುವೆಲ್ಲರ‍್ಸ್‌ನ ಮಾಲಕರಾಗಿದ್ದ ಹಿರಿಯ ಸ್ವರ್ಣೋದ್ಯಮಿಯಾಗಿದ್ದ ಭಾಸ್ಕರ್ ಭಟ್ ಅವರಿಗೆ ಪುತ್ತೂರು ಜ್ಯುವೆಲ್ಲರ‍್ಸ್ ಅಸೋಸಿಯೇಶನ್ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮವು ಜು.14ರಂದು ಕೋರ್ಟು ರಸ್ತೆಯಲ್ಲಿನ ಜೆಸಿಐ ಮುಳಿಯ ಪರ್ಸನಾಲಿಟಿ ಡೆವೆಲಪ್‌ಮೆಂಟ್ ಸೆಂಟರ್‌ನಲ್ಲಿ ನಡೆಯಿತು.


ಪುತ್ತೂರು ಜ್ಯವೆಲ್ಲರ‍್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಜಿ.ಎಲ್.ಆಚಾರ್ಯ ಜ್ಯುವಲ್ಲರ‍್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ, ಹಿರಿಯ ಸ್ವರ್ಣೋದ್ಯಮಿ ಡಿ. ಜಗದೀಶ್ ಶೆಣೈ, ಕಾಮತ್ ಜ್ಯುವೆಲ್ಲರ‍್ಸ್‌ನ ಮಾಲಕ ವೆಂಕಟ್ರಾಯ ಕಾಮತ್ ನುಡಿನಮನ ಸಲ್ಲಿಸಿದರು. ಈ ಸಂದರ್ಭ ರಾಜ್ ಜ್ಯುವೆಲ್ಲರ‍್ಸ್‌ನ ಮಾಲಕ ರಾಜಶೇಖರ್, ಆಶಾ ಜ್ಯುವಲ್ಲರ‍್ಸ್‌ನ ಸಂತೋಷ್, ವಿ.ಎಸ್ ಜ್ಯುವಲ್ಲರ‍್ಸ್‌ನ ಶ್ರೀನಿವಾಸ ಕಾಮತ್ ಸಹಿತ ಹಲವಾರು ಮಂದಿ ಜ್ಯುವೆಲ್ಲರ‍್ಸ್‌ನ ಮಾಲಕರು ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here