ಉಪ್ಪಳಿಗೆಯಲ್ಲಿ ರಸ್ತೆಗೆ ಬಿದ್ದ ಮರ – ಸ್ಥಳೀಯರಿಂದ ತೆರವು

0

ನಿಡ್ಪಳ್ಳಿ: ಪುತ್ತೂರು ಪಾಣಾಜೆ ಮುಖ್ಯ ರಸ್ತೆಯ ಉಪ್ಪಳಿಗೆಯಲ್ಲಿ ರಸ್ತೆಗೆ ಮರವೊಂದು ಜು.18 ರಂದು ಮಧ್ಯಾಹ್ನ ಉರುಳಿ ಬಿದ್ದ ಘಟನೆ ಸಂಭವಿಸಿತು.

ತಂಬುತ್ತಡ್ಕ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ಸು ಪ್ರಯಾಣಿಕರನ್ನು ಇಳಿಸಲು ನಿಂತ ತಕ್ಷಣ ಅದರ ಹಿಂದುಗಡೆ ಮರ ಬಿದ್ದಿದ್ದು ಬಸ್ಸಿನ ಮೇಲೆ ಬೀಳುವುದು ಸ್ವಲ್ಪದರಲ್ಲೇ ತಪ್ಪಿದೆ. ಪ್ರಾಥಮಿಕ ಶಾಲೆಯ ಕಾಂಪೌಂಡ್ ಹೊರಗೆ ರಸ್ತೆ ಬದಿ ಇದ್ದ ಮರ ಇದಾಗಿದೆ. ತಕ್ಷಣ ಸ್ಥಳೀಯರು ಮತ್ತು ರಿಕ್ಷಾ ಚಾಲಕರು ಸೇರಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

LEAVE A REPLY

Please enter your comment!
Please enter your name here