ಕೇಪು: ಚೆಲ್ಲಡ್ಕದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ -ಅಪಾರ ನಷ್ಟ- ಅಪಾಯದಿಂದ ಪಾರು

0

ಕೇಪು: ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯೊಳಗಿನ ಸೊತ್ತುಗಳೆಲ್ಲ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆಯಾದರೂ ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೇಪು ಚೆಲ್ಲಡ್ಕದಲ್ಲಿ ನಡೆದಿದೆ.
ಚೆಲ್ಲಡ್ಕ ಶಶಿಶೇಖರ ಭಂಡಾರಿಯವರ ಮನೆಗೆ ಜು.18ರ ರಾತ್ರಿ ವೇಳೆಗೆ ಸಿಡಿಲು ಬಡಿದು ಮನೆಯೊಳಗಿನ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿ ಅಪಾರ ನಷ್ಟ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಒಂದು ಭಾಗ ಉರಿದು ಹೋಗಿರುತ್ತದೆ. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಶೇಖರ ಭಂಡಾರಿ, ಅವರ ಪತ್ನಿ ಹಾಗೂ ಮಕ್ಕಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೇಪು ಗ್ರಾ.ಪಂ ಅಧ್ಯಕ್ಷ ರಾಘವ ಸಾರಡ್ಕ, ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ರಾಜೀವ ಭಂಡಾರಿ ಪುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಗಜೀವನ್ ರಾಮ್ ಮೈರ, ಗ್ರಾಮ ಲೆಕ್ಕಾಧಿಕಾರಿ ಅಜಿತ್ ಕುಮಾರ್, ಸಹಾಯಕ ಗಣೇಶ ಪ್ರಭು, ಗ್ರಾ.ಪಂ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here