ಕುಂಬ್ರ: ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋನನೆಯ ಒಳಮೊಗ್ರು ಒಕ್ಕೂಟದ ಸದಾಶಿವ ಗುರಿಕುಮೇರು ಸಂಘದ ಸದಸ್ಯರಾದ ಬಾಲಕೃಷ್ಣರವರ ಪುತ್ರನ ಚಿಕಿತ್ಸೆಗೆ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 36,500 ರೂಪಾಯಿಗಳ ಮೊತ್ತದ ಚೆಕ್ ಅನ್ನು ಕುಂಬ್ರ ವಲಯದ ಅಧ್ಯಕ್ಷರಾದ ಎಸ್.ಮಾಧವ ರೈ ಕುಂಬ್ರ, ಒಳಮೊಗ್ರು ಒಕ್ಕೂಟದ ಅಧ್ಯಕ್ಷ ಗೋವಿಂದ ನಾಯ್ಕ, ವಲಯ ಮೇಲ್ವಿಚಾರಕಿ ಜಯಂತಿ ಕೆ, ಕೃಷಿ ಮೇಲ್ವಿಚಾರಕ ಶಿವರಂಜನ್‌ರವರು ಹಸ್ತಾಂತರ ಮಾಡಿದರು.


ಈ ಸಂದರ್ಭದಲ್ಲಿ ಒಳಮೊಗ್ರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸವಿತಾ,ಕುಂಬ್ರ ಬಿ.ಒಕ್ಕೂಟದ ಅಧ್ಯಕ್ಷೆ ಲಲಿತಾ, ವಿಎಲ್‌ಇ ಸಂದ್ಯಾ ಹಾಗೂ ಸುವಿಧಾ ಸಹಾಯಕಿ ತುಳಸಿಮಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here