ನಾಡೋಳಿ : ಮಣ್ಣು ಕುಸಿತ – ಸವಣೂರು ಗ್ರಾ.ಪಂ.ತಂಡ ವೀಕ್ಷಣೆ

0

ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ-ಅಂಕತಡ್ಕ ಸಂಪರ್ಕಿಸುವ ನಾಡೋಳಿ ಸೇತುವೆಯ ಕೂಡು ರಸ್ತೆಯ ಎರಡೂ ಬದಿಗಳಲ್ಲಿಯೂ ಮಣ್ಣು ಕುಸಿಯುತ್ತಿದ್ದು, ಸ್ಥಳಕ್ಕೆ ಸವಣೂರು ಗ್ರಾ.ಪಂ.ತಂಡ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ಲೆಕ್ಕ ಸಹಾಯಕ ಎ.ಮನ್ಮಥ ,ಸದಸ್ಯರಾದ ಸತೀಶ್ ಅಂಗಡಿಮೂಲೆ, ಹರಿಕಲಾ ರೈ ,ತಾರಾನಾಥ ಬೊಳಿಯಾಲ, ಕಂದಾಯ ಇಲಾಖೆ ಗ್ರಾಮ ಸಹಾಯಕ ಬಾಬು ಬಿ.,ಗ್ರಾ.ಪಂ.ಸಿಬ್ಬಂದಿ ಪ್ರಮೋದ್, ಸ್ಥಳೀಯರಾದ ನವೀನ್ ನಾಡೋಳಿ ಮೊದಲಾದವರಿದ್ದರು.

ಮಣ್ಣು ತೆರವು:
ರಸ್ತೆಗೆ ನಿರಂತರವಾಗಿ ಬೀಳುತ್ತಿರುವ ಮಣ್ಣನ್ನು ಮೊಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯಿಂದ ತೆರವು ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here