ಬೇರಿಕೆ (ಕಜೆ) ಸ್ಮಾರ್ಟ್ ಅಂಗನವಾಡಿಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿ. ಸಂಸ್ಥೆಯಿಂದ ಕುರ್ಚಿ ಹಾಗೂ ಜಮಖಾನೆ ಕೊಡುಗೆ

0

ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಬೇರಿಕೆ (ಕಜೆ) ಸ್ಮಾರ್ಟ್ ಅಂಗನವಾಡಿಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆಯ ವತಿಯಿಂದ ಪುಟಾಣಿಗಳಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಗೂ ಜಮಖಾನೆ (ಬೆಡ್‌ ಶೀಟ್‌) ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಪ್ರದೀಪ್, ಶಾಖಾ ವ್ಯವಸ್ಥಾಪಕರಾದ ಜಯಂತ್, ಕೇಂದ್ರ ಮ್ಯಾನೇಜರುಗಳಾದ ದಿವ್ಯ ಹಾಗೂ ಚೈತ್ರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವ ಶೀನಪ್ಪ ಕುಲಾಲ್, ಬಾಲ ವಿಕಾಸ ಸಮಿತಿಯ ಸದಸ್ಯರಾಗಿರುವ ಮೆಲ್ವಿನ್ ಮಸ್ಕರೇನಸ್ ಹಾಗೂ ರತ್ನಾಕರ ಪ್ರಭು, ಅಂಗನವಾಡಿಯ ಪುಟಾಣಿಗಳು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಭವ್ಯ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ರೇಖಾ ದಾಮೋದರ್ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿ ಮಮತಾ ಲೋಕೇಶ್ ವಂದಿಸಿದರು. ಸಹಾಯಕಿ ಮಾಲತಿ ಹುಕ್ರಪ್ಪ ಸಹಕರಿಸಿದರು.

LEAVE A REPLY

Please enter your comment!
Please enter your name here