ಶ್ರೀರಾಮ ವಿದ್ಯಾಲಯ ಸೂರ್ಯನನಗರ ನೆಲ್ಯಾಡಿ – ವರಮಹಾಲಕ್ಷ್ಮೀ ಪೂಜಾ ಪೂರ್ವ ಭಾವಿ ಸಭೆ ನೂತನ ಸಮಿತಿ ರಚನೆ

0

ನೆಲ್ಯಾಡಿ: ಶ್ರೀರಾಮ ಶಾಲೆ ಸೂರ್ಯ ನಗರ, ನೆಲ್ಯಾಡಿ ಇಲ್ಲಿ ವರಮಹಾಲಕ್ಷ್ಮಿ ಪೂಜೆಯ ಪೂರ್ವಭಾವಿ ಸಭೆಯು ಜು.18ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರಕಾಂಚನ ವಹಿಸಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಸುಬ್ರಾಯ ಪುಣಚ, ಶಿಶುಮಂದಿರದ ಅಧ್ಯಕ್ಷೆ ಪುಷ್ಪಲತಾ ಜನಾರ್ಧನ್, ಶಾಲಾ ಮುಖ್ಯ ಶ್ರೀಮಾನ್ ಗಣೇಶ್ ವಾಗ್ಲೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸುಪ್ರೀತಾ ರವಿಚಂದ್ರ ಹೊಸವಕ್ಲು ಅಧ್ಯಕ್ಷರಾಗಿ, ಪ್ರೀತಾರವರು ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತೃಮಂಡಳಿಯ ಸದಸ್ಯರು, ಪೋಷಕರು, ಎಲ್ಲಾ ಮಾತಾಜಿವೃಂದದವರು ಹಾಜರಿದ್ದರು. ಶಾರದ ಮಾತಾಜಿ ಸ್ವಾಗತಿಸಿ, ವಿನ್ಯಶ್ರೀ ಮಾತಾಜಿ ಧನ್ಯವಾದ ಗೈದರು. ಕುಮಾರಿ ಯಶಸ್ವಿನಿ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here