ತಿಂಗಳಾಡಿ: ಉದ್ಯಮಿ ಬೆಳಿಯೂರುಗುತ್ತು ಪ್ರಕಾಶ್ ಶೆಟ್ಟಿ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಮೂಲತಃ ಕೆದಂಬಾಡಿ ಗ್ರಾಮದ ಎಂಡೆಸಾಗು ನಿವಾಸಿಯಾಗಿದ್ದು ಪ್ರಸ್ತುತ ಮುಂಬೈಯಲ್ಲಿ ವೈನ್ ಶಾಫ್ ನಡೆಸುತ್ತಿರುವ ಬೆಳಿಯೂರು ಗುತ್ತು ಪ್ರಕಾಶ್ ಶೆಟ್ಟಿ (58 ವ)ರವರು ಮುಂಬೈಯಲ್ಲಿ ಹೃದಯಾಘಾತದಿಂದ ಜು.19ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ಕಳೆದ ಸುಮಾರು 26 ವರ್ಷಗಳಿಂದ ಮುಂಬೈಯಲ್ಲಿ ಮತ್ತು ಕುವೈತ್‌ ನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದು ಕಳೆದ 6 ವರ್ಷಗಳಿಂದ ವೈನ್‌ಶಾಫ್ ನಡೆಸುತ್ತಿದ್ದರು. ಮೃತರು ಪತ್ನಿ ಲೀಲಾ ಶೆಟ್ಟಿ, ಪುತ್ರಿ ವೈಭವಿ ಶೆಟ್ಟಿ, ಪುತ್ರ ವಿಘ್ನೇಶ್ ಶೆಟ್ಟಿ, ಸಹೋದರಿ ವಿಶಾಲಾಕ್ಷಿ, ಸಹೋದರರಾದ ವಿನೋದ್ ಶೆಟ್ಟಿ ಹಾಗೂ ಸೂರ್ಯಪ್ರಸನ್ನ ಶೆಟ್ಟಿ ಎಂಡೆಸಾಗು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಎಂಡೆಸಾಗು ಮನೆಗೆ ತರಲಾಗುತ್ತಿದ್ದು ಜು.20ರಂದು ಬೆಳಿಗ್ಗೆ ಎಂಡೆಸಾಗು ಮನೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here