ಕಾರ್ಗಿಲ್ ಯೋಧರಿಗೆ ಅಂಚೆ ಇಲಾಖೆ ವತಿಯಿಂದ ಗೌರವಾರ್ಪಣೆ

0

ಪುತ್ತೂರು: ಕಾರ್ಗಿಲ್ ವಿಜಯೋತ್ಸವದ 25ನೇಯ ವಾರ್ಷಿಕೋತ್ಸವ ಪ್ರಯುಕ್ತ ಪುತ್ತೂರಿನಲ್ಲಿ ನಡೆದ ಕಾರ್ಗಿಲ್ ಯೋಧರ ಮೆರವಣಿಗೆ ಸಂದರ್ಭದಲ್ಲಿ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ (ಪರಮವೀರ ಚಕ್ರ ಪುರಸ್ಕೃತರು) ಹಾಗೂ ಕ್ಯಾ. ನವೀನ್ ನಾಗಪ್ಪ ( ಸೇನಾ ಪದಕ ಪುರಸ್ಕೃತರು) ಇವರನ್ನು ಪುತ್ತೂರು ಅಂಚೆ ಇಲಾಖಾ ವತಿಯಿಂದ ಗೌರವಿಸಲಾಯಿತು.

ಪ್ರಧಾನ ಅಂಚೆ ಪಾಲಕ ತೀರ್ಥ ಪ್ರಸಾದ್, ಸೇನಾ ನಿವೃತ್ತ ಅಂಚೆ ಸಿಬ್ಬಂದಿಗಳಾದ ದಿನೇಶ್ ಕುಮಾರ್, ಕೇಶವ ಭಟ್ ಹಾಗೂ ಹಿರಿಯ ಅಂಚೆ ಸಿಬ್ಬಂದಿ ತಿರುಮಲೇಶ್ವರವರು ವೀರ ಯೋಧರಿಗೆ ಮಾಲಾರ್ಪಣೆ ಮಾಡಿ, ವಂದಿಸಿದರು.
ಈ ವೇಳೆ ಇಲಾಖಾ ಸಿಬ್ಬಂದಿಗಳೆಲ್ಲರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here