ಶ್ರೀಭಾರತಿ ವಿದ್ಯಾಸಂಸ್ಥೆ ಆಲಂಕಾರು- ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ

0

ಆಲಂಕಾರು: ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಶ್ರೀ ಭಾರತಿ ವಿದ್ಯಾಸಂಸ್ಥೆ ಆಲಂಕಾರಿನಲ್ಲಿ ಜು.19 ನಡೆಯಿತು.


ಈ ಸಂದರ್ಭದಲ್ಲಿ ನಡೆದ ಸರಳ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಗಾಯತ್ರಿ ಸುರೇಶ್ ವಹಿಸಿದ್ದರು.

ವಿದ್ಯಾಸಂಸ್ಥೆಯ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಕಾರ್ಯದರ್ಶಿಯಾದ ಇಂದುಶೇಖರ ಶೆಟ್ಟಿ ಬರೆಪುದೇಲು, ಆಡಳಿತ ಮಂಡಳಿ ಸದಸ್ಯರಾದ ವಿನಯ .ಎಲ್. ಶೆಟ್ಟಿ, ಕೇಶವ ಭಾರತಿ ಶಿಶುಮಂದಿರದ ಅಧ್ಯಕ್ಷೆ ಸರೋಜ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷ ಶ್ರೀನಾಥ್ ಕೇವಳ ಮತ್ತು ಮಮತಾ ಕಮಲಾಕ್ಷ ಶೆಟ್ಟಿ ಅಂಬರ್ಜೆ, ಶಾಲಾ ಕನ್ನಡ ಮಾಧ್ಯಮದ ಮುಖ್ಯಮಾತಾಜಿ ಆಶಾ. ಎಸ್. ರೈ, ಸೇರಿದಂತೆ ಪೂಜಾ ಸಮಿತಿಯ ಸದಸ್ಯರು, ಶಾಲಾ ಮಾತೃಮಂಡಳಿಯ ಮಾತೆಯರ, ಶಿಕ್ಷಕ ವೃಂದ, ಪಾಲಕ ವೃಂದ, ಶಾಲಾ ಹಿತೈಷಿ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here