ಜು.21: ಶ್ರೀ ಶಾರದಾ ಹಿಂದೂಸ್ಥಾನಿ ಸಂಗೀತ ವಿದ್ಯಾಲಯ ವಾರ್ಷಿಕೋತ್ಸವ-ಸರಿಗಮಪ ವಿಜೇತ ಕೀರ್ತನ್ ಹೊಳ್ಳರಿಂದ ಶಾಸ್ತ್ರೀಯ ಗಾಯನ

0

ಪುತ್ತೂರು: ನೆಹರುನಗರ ಶ್ರೀ ಶಾರದಾ ಹಿಂದೂಸ್ಥಾನಿ ಸಂಗೀತ ವಿದ್ಯಾಲಯದಿಂದ ’ನಾದಗುಂಜನ್’ ಮತ್ತು 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಜು.21ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಂಟೆ 10.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಸಂಜೆ ಗಂಟೆ 6.30ರಿಂದ ಅತಿಥಿ ಕಲಾವಿದ ಝೀ ಕನ್ನಡ ವಾಹಿನಿಯ ಸರಿಗಮಪ 15ನೇ ಸರಣಿಯ ವಿಜೇತ ಕೀರ್ತನ್ ಹೊಳ್ಳ ಬೆಂಗಳೂರು ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here