ಕರ್ನಾಟಕ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದ ನೆಲ್ಲಿಕಟ್ಟೆ ನಿವಾಸಿ ಶ್ರೀಧರ್ ನಿಧನ

0

ಪುತ್ತೂರು: ರಾಜ್ಯದಲ್ಲಿ ಕರ್ನಾಟಕ ರಾಜ್ಯ ಲಾಟರಿ ಇದ್ದ ಸಂದರ್ಭ ಅದನ್ನು ಮಾರಾಟ ಮಾಡುತ್ತಿದ್ದ ನೆಲ್ಲಿಕಟ್ಟೆ ನಿವಾಸಿ ಅವಿವಾಹಿತ ಶ್ರೀಧರ್(72ವ) ಎಂಬವರು ಜು.20ರಂದು ಬಸ್ ನಿಲ್ದಾಣದ ಬಳಿ ನಿಧನರಾದರು.


ದಿ.ಅಣ್ಣು ಭಂಡಾರಿ ಅವರ ಪುತ್ರರಾಗಿರುವ ನೆಲ್ಲಿಕಟ್ಟೆ ನಿವಾಸಿಯಾಗಿರುವ ಶ್ರೀಧರ್ ಭಂಡಾರಿ ಅವರು ಬಹಳ ವರ್ಷಗಳ ಹಿಂದೆ ಪುತ್ತೂರು ಬಸ್ ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ಲಾಟರಿ ಮಾರಾಟ ಮಾಡುತ್ತಿದ್ದರು. ಕರ್ನಾಟಕ ರಾಜ್ಯ ಲಾಟರಿ ನಿಷೇಧದ ಬಳಿಕ, ಪುತ್ತೂರು ಸರ್ವಿಸ್ ವಾಹನಗಳಿಗೆ ಜನ ಕರೆಯುವ ಕೆಲಸ ಮಾಡುತ್ತಿದ್ದರು. ಜೊತೆಗೆ ಅಲ್ಲಿ ಇಲ್ಲಿ ಇತರ ಕೆಲಸ ಕಾರ್ಯ ನಿರ್ವಹಿಸುತ್ತಿದ್ದ ಅವರು ಸದಾ ಬಸ್‌ನಿಲ್ದಾಣದ ಬಳಿಯಲ್ಲೇ ಇರುತ್ತಿದ್ದರು. ಜು.20ರಂದು ಅವರು ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ಮೃತರು ಸಹೋದರ ಸಂಜೀವ ಭಂಡಾರಿ ಮತ್ತು ಸುಬ್ರಾಯ ಭಂಡಾರಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here