ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ- ಓರ್ವನ ಬಂಧನ

0

ಉಪ್ಪಿನಂಗಡಿ: ಪರವಾನಿಗೆಯಿಲ್ಲದೆ ಮರ ಸಾಗಾಟ ಪ್ರಕರಣವೊಂದನ್ನು ಇಲ್ಲಿನ ಮಠ ಎಂಬಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಮರ ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದಾರೆ.


ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಿಖಿಲ್ ಸಂಗಮ್ (26) ಬಂಧಿತ ಆರೋಪಿ. ಈತ ಮಂಗಳೂರು ಕಡೆಗೆ ಲಾರಿಯಲ್ಲಿ ಪರವಾನಿಗೆ ರಹಿತವಾಗಿ ಕಲ್‌ಬಾಗಿ ಮರದ ದಿಮ್ಮಿಗಳನ್ನು ಹೇರಿಕೊಂಡು ಮಂಗಳೂರು ಕಡೆಗೆ ಸಾಗುಸುತ್ತಿದ್ದ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಭವಾನಿ ಶಂಕರ್, ಅರಣ್ಯಾಧಿಕಾರಿಗಳಾದ ವಿನಯ ಚಂದ್ರ, ಅರಣ್ಯಾಧಿಕಾರಿ ವಿನಯ ಚಂದ್ರ, ಚಾಲಕರಾದ ತೇಜ ಕುಮಾರ್ ಹಾಗೂ ಕಿಶೋರ್ ಭಾಗವಹಿಸಿದರು.

LEAVE A REPLY

Please enter your comment!
Please enter your name here