ಸರ್ವೆ ಹೊಳೆಯಲ್ಲಿ ಯುವಕ ಕಣ್ಮರೆಯಾಗಿರುವ ಶಂಕೆ-ಕಾರ್ಯಾಚರಣೆ ಚುರುಕುಗೊಳಿಸುವಂತೆ ಶಾಸಕರ ಸೂಚನೆ

0

ಪುತ್ತೂರು: ಸರ್ವೆ ಹೊಳೆ ಬದಿಯಲ್ಲಿ ಗಾಡಿ ನಿಲ್ಲಿಸಿದ ಯುವಕನೋರ್ವ ಸರ್ವೆ ಗೌರಿ ಹೊಳೆಗೆ ಹಾರಿರುವ ಬಗ್ಗೆ ಶಂಕೆ ಇದ್ದು ನಾಪತ್ತೆಯಾದ ಯುವಕನ ಪತ್ತೆಗಾಗಿ ಆಗ್ನಿ ಶಾಮಕದಳದವರು ಕಾರ್ಯಾಚರಣೆ ನಡೆಸುತ್ತಿದ್ದು ಈ ಕಾರ್ಯಾಚರಣೆಯನ್ನು ಚುರುಗೊಳಿಸುವಂತೆ ಪುತ್ತೂರು ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಕುದ್ಮಾರು ಗ್ರಾಮದ ತೆಕ್ಕಿತ್ತಡಿ ಚಂದ್ರ ಗೌಡರ ಪುತ್ರ ಸನ್ಮಿತ್ ನಾಪತ್ತೆಯಾದ ಯುವಕ. ಇವರ ಬೈಕ್ , ಮೊಬೈಲ್ ಮತ್ತು ಪರ್ಸ್ ಬೈಕಿನಲ್ಲಿದೆ. ಬೈಕ್ ಹೊಳೆ ಬದಿ ನಿಲ್ಲಿಸಲಾಗಿದ್ದು ಯುವಕ ಹೊಳೆಗೆ ಹಾರಿರುವ ಬಗ್ಗೆ ಶಂಕೆ ಇದೆ. ಆಗ್ನಿ ಶಾಮದಳದವರು ಕಾರ್ಯಾಚರಣೆ ನಡೆಸುತ್ತಿದ್ದು ಎನ್‌ಡಿಆರ್‌ಎಫ್ ಪಡೆಯವರನ್ನು ಬಳಸಿ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here