ನೆಹರುನಗರ: ಟ್ಯಾಂಕರ್-ಸ್ಕೂಟರ್ ಅಪಘಾತ- ಸ್ಕೂಟರ್ ಸವಾರ ವಿಶೇಷಚೇತನ ಮೃತ್ಯು

0

ಪುತ್ತೂರು:ಜು.23ರ ರಾತ್ರಿ ನೆಹರುನಗರ ಮಂಜಲ್ಪಡ್ಡು ಬಳಿಯ ಮಂಗಲ ಸ್ಟೋರ್ಸ್ ಎದುರು ಟ್ಯಾಂಕರ್ 2 ಮತ್ತು ವಿಕಲಚೇತನರೋರ್ವರ ತ್ರಿವೀಲರ್ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮಿತ್ತೂರು ಏಮಾಜೆ ದಿ. ಐತ್ತಪ್ಪನಾಯ್ಕ ಎಂಬವರ ಪುತ್ರ ವಿಶೇಷಚೇತನರಾಗಿದ್ದ ಶಿವರಾಮ ನಾಯ್ಕ(50ವ. )ಮೃತಪಟ್ಟವರು. ಅವರು ಚಲಾಯಿಸುತ್ತಿದ್ದ ತ್ರಿವೀಲರ್ ಸ್ಕೂಟರ್ ಮತ್ತು ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಶಿವರಾಮ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಕೊಠಡಿಗೆ ಕೊಂಡೊಯ್ಯಲಾಗಿದೆ. ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರಿಯನ್ನು ಅಗಲಿದ್ದಾರೆ.

ಚರುಂಬುರಿ ವ್ಯವಹಾರ ಸ್ವಾಭಿಮಾನಿ ಜೀವನ:
ಜಾತ್ರೆ, ಇತರ ಕಾರ್ಯಕ್ರಮಗಳಲ್ಲಿ ಚರುಂಬುರಿ ಸ್ಟಾಲ್ ಇಟ್ಟು ವ್ಯಾಪಾರ ಮಾಡುತ್ತಿದ್ದ ಶಿವರಾಮ ನಾಯ್ಕ ಅವರು ಸಂತೆಯಲ್ಲೂ ವ್ಯಾಪಾರ ಮಾಡುತ್ತಾ ಸ್ವಾಭಿಮಾನಿ ಜೀವನ ನಡೆಸುತ್ತಿದ್ದರು.ಇತ್ತೀಚೆಗೆ ಅವರು ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದರು ಎಂದು ಸ್ಥಳೀಯ ಸುಧೀರ್ ರೈ ಅವರು ಮಾಹಿತಿ ನೀಡಿದ್ದಾರೆ.

ಸ್ಥಳೀಯರಿಂದ ಟ್ರಾಫಿಕ್ ಕಂಟ್ರೋಲ್
ಅಪಘಾತದಲ್ಲಿ ಮೃತಪಟ್ಟ ಶಿವರಾಮ ಅವರ ಮೃತದೇಹ ಸ್ಕೂಟರ್‌ನಲ್ಲೇ ಇತ್ತು .ಮಳೆ ಹಿನ್ನೆಲೆಯಲ್ಲಿ ಸ್ಥಳೀಯರು ಮೃತ ದೇಹಕ್ಕೆ ಪ್ಲಾಸ್ಟಿಕ್‌ ಹೊದಿಸಿದ್ದರು. ಅಪಘಾತದಿಂದ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು.ಈ ಸಂದರ್ಭ ಸ್ಥಳೀಯ ಪರಿಸರದವರು ಸೇರಿ ಟ್ರಾಫಿಕ್ ಕಂಟ್ರೋಲ್ ಮಾಡಿ ಸುಗಮ ಸಂಚಾರ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಸಂಚಾರ ಪೊಲೀಸರು ಆಗಮಿಸಿದರು.ಬಳಿಕ ಆ್ಯಂಬುಲೆನ್ಸ್‌ನಲ್ಲಿ ಮೃ ಕೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

LEAVE A REPLY

Please enter your comment!
Please enter your name here