ಅರಿಯಡ್ಕ: ಹಲಸಿನ ಹಣ್ಣು ತೆಗೆಯುವಾಗ ಹಲ್ಲೆ, ಬೆದರಿಕೆ – ಪ್ರಕರಣ ದಾಖಲು

0

ಪುತ್ತೂರು: ಮರದಿಂದ ಹಲಸಿನ ಹಣ್ಣು ತೆಗೆಯುವಾಗ ಸ್ಥಳೀಯ ಸಂಬಂಧಿ ದಂಪತಿ ಸಮೇತ ಬಂದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅರಿಯಡ್ಕ ಗ್ರಾಮದ ಅರುಣ್ ಕುಮಾರ್ ಹಲ್ಲೆಗೊಳಗಾದವರು. ನಾನು ನನಗೆ ಸೇರಿದ ಜಾಗದಲ್ಲಿ ಹಲಸಿನ ಹಣ್ಣನ್ನು ತೆಗೆಯುತ್ತಿರುವಾಗ ನೆರೆಯ ಸಂಬಂಧಿ ನಾಗೇಶ್ ಮತ್ತು ಆತನ ಹೆಂಡತಿ ಯಶೋಧರ ರವರು ಬಂದು ನನಗೆ ಮತ್ತು ನನ್ನ ತಾಯಿ ಜಯಲಕ್ಷ್ಮೀ ಅವರಿಗೆ ಅವಾಚ್ಯವಾಗಿ ಬೈದಿರುತ್ತಾರೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಹಲ್ಲೆ ನಡೆಸಿರುತ್ತಾರೆ. ಈ ವೇಳೆ ನನ್ನ ತಾಯಿ ಗಲಾಟೆಯನ್ನು ಬಿಡಿಸಿದ್ದು, ಆರೋಪಿ ನಾಗೇಶ್ ಮಣಿಯಾಣಿಯು ನನಗೆ ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಹಲ್ಲೆಗೊಳಗಾದ ಅರುಣ್ ಕುಮಾರ್ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here