ಕಡಬ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ ನೆರವು- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ನಿಯೋಗಕ್ಕೆ ಸ್ಪಂದನೆ

0

ಕಡಬ: ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ನೆರವಿನ ಬಗ್ಗೆ ಭೇಟಿ ಮಾಡಿದ ನಿಯೋಗಕ್ಕೆ ಸ್ಪಂದಿಸಿದ್ದಾರೆ.

ಈ ಹಿಂದೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ತೆರಳುತ್ತಿರುವ ಸಂದರ್ಭದಲ್ಲಿ ಹೊಸಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನದ ಕಾಮಗಾರಿಯನ್ನು ವೀಕ್ಷಿಸಿದ್ದರು.ಈ ಸಂದರ್ಭದಲ್ಲಿ ಸರಕಾರದಿಂದ ಮತ್ತು ವೈಯಕ್ತಿಕ ನೆರವು ನೀಡಬೇಕೆಂದು ವಿನಂತಿಸಲಾಗಿತ್ತು. ಈ ವೇಳೆ ಡಿ.ಕೆ.ಶಿಯವರು ವೈಯಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿ.ಯವರನ್ನು ಭೇಟಿಯಾದ ಸಂಧರ್ಭದಲ್ಲಿ ನಿಯೋಗಕ್ಕೆ ಸ್ಪಂದಿಸಿದ್ದಾರೆ.ಈ ಸಂಧರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು, ಪ್ರಮುಖರಾದ ಶಿವರಾಮ ಏನೆಕಲ್ಲು, ಕಿರಣ್ ಬುಡ್ಲೆಗುತ್ತು, ಗೋಪಾಲ ಎಣ್ಣೆಮಜಲು,ರಂಜಿತ್ ಪದಕಂಡ, ಮುಖಂಡರಾದ ಭರತ್ ಮುಂಡೋಡಿ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗಣೇಶ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.


ಇತರ ಒಕ್ಕಲಿಗ ನಾಯಕರ ಭೇಟಿ
ಈ ನಿಯೋಗವು ಸ್ವೀಕರ್ ಯು.ಟಿ. ಖಾದರ್, ಅಲ್ಲದೆ ಅಶ್ವತ್ಥನಾರಾಯಣ ಸೇರಿದಂತೆ ವಿವಿಧ ಒಕ್ಕಲಿಗ ನಾಯಕರನ್ನು ಭೇಟಿ ಮಾಡಿದ್ದು ವೈಯಕ್ತಿಕ ನೆರವು ಹಾಗೂ ಸರಕಾರದಿಂದ ಅನುದಾನ ಕೊಡಿಸುವ ಬಗ್ಗೆ ವಿನಂತಿಸಿದ್ದಾರೆ. ನಿಯೋಗಕ್ಕೆ ಮುಖಂಡರು ನೆರವಿನ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here