ಸಾಮೆತ್ತಡ್ಕ ಸ. ಹಿ. ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

0

ಪುತ್ತೂರು: “ನಮ್ಮ ಶಾಲೆ “ಸ. ಹಿ. ಪ್ರಾ. ಸಾಮೆತ್ತಡ್ಕದಲ್ಲಿ “ವನಮಹೋತ್ಸವ ಕಾರ್ಯಕ್ರಮ “ಲಯನ್ಸ್ ಕ್ಲಬ್ ವತಿಯಿಂದ ಜು.23ರಂದು ನಡೆಯಿತು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್ ಇವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಅರವಿಂದ್ ಭಗವಾನ್ ರೈ,ಲಯನ್ಸ್ ಕೋಶಾಧಿಕಾರಿ ಸುಧಾಕರ್ ಕೆ. ಪಿ, ಜಿಲ್ಲಾ ಲಯನ್ಸ್ ಕನ್ವಿನರ್ ಜಯಶ್ರೀ ಶೆಟ್ಟಿ,ಲಯನ್ಸ್ ವತ್ಸಲಾ ರಾಜ್,ಲಯನ್ಸ್ ಪ್ರೇಮಾ ಕೆಮ್ಮಾಯಿ, ಲಯನ್ಸ್ ವಿಶ್ವನಾಥ್ ಗೌಡ ಬನ್ನೂರು ಉಪಸ್ಥಿತರಿದ್ದರು. ಶಾಲಾ ವತಿಯಿಂದ SDMC ಅಧ್ಯಕ್ಷ ಶಿವಪ್ರಸಾದ್, ಶಾಲಾ ಸ್ಥಾಪಕಾಧ್ಯಕ್ಷರು ಹಾಗೂ “ನಮ್ಮ ಶಾಲೆ ಸಾಮೆತ್ತಡ್ಕ “ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ” ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಫಾಹಿಝ್ ಹಾಗೂ ಶಿಕ್ಷಕ ವರ್ಗದವರು ಕಾರ್ಯಕ್ರಮ ಕ್ಕೆ ಸಹಕರಿಸಿದರು.ಮುಖ್ಯ ಶಿಕ್ಷಕಿ ಮರಿಯಾ ಎಂ. ಎ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here