ವಿವೇಕಾನಂದ ಯುವಕ ವೃಂದದಿಂದ ನಡೆದ 25 ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ

0

ಅರಿಯಡ್ಕ: ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ (ರಿ.) ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿವಸ ಹಾಗೂ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮವನ್ನು ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ಗುರುವಪ್ಪ ಹೊಸಗದ್ದೆರವರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಅಪ್ಪಯ್ಯ ನಾಯ್ಕ ಬಪ್ಪಪುಂಡೆಲು, ಗೌರವಧ್ಯಕ್ಷರಾದ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು, ಗೌರವ ಸಲಹೆಗಾರರಾದ ಕೃಷ್ಣ ಕುಲಾಲ್ ಡಿ, ದುರ್ಗಾಪ್ರಸಾದ್ ಕುತ್ಯಾಡಿ, ವಸಂತ ಕುಲಾಲ್ ಆಕಾಯಿ, ಸದಸ್ಯರಾದ ಸುಕುಮಾರ್ ಕರ್ಕೇರ ಮಡ್ಯoಗಳ, ಹರಿಶ್ಚಂದ್ರ ಆಚಾರ್ಯ ಹೊಸಗದ್ದೆ, ಮುಕುಂದ ನಾಯ್ಕ ದೇವುಮೂಲೆ, ಶಿವಪ್ಪ ನಾಯ್ಕ ಆಕಾಯಿ, ಜಯಪ್ರಕಾಶ ನಾಯ್ಕ ಕುತ್ಯಾಡಿ, ಚಂದ್ರ ಜಿ ಕುತ್ಯಾಡಿ,ಸ್ಥಳೀಯರಾದ ಗೋಪಾಲಕೃಷ್ಣ ಮಣಿಯಾಣಿ ಪಾದಲಾಡಿ, ನವೀನ್ ಕರ್ಕೇರ ಮಾನಿಯಡ್ಕ, ಲಕ್ಷ್ಮಿ ಕುಲಾಲ್ ಕೌಡಿಚ್ಚಾರು, ಉಪಸ್ಥಿತರಿದ್ದರು.,
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ಯೋಗೀಶ್ ಕೌಡಿಚ್ಚಾರು ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ನೀಡಿದರು, ಗೌರವ ಸಲಹೆಗಾರರಾದ ದೀಪಕ್ ಕುಲಾಲ್ ಕೌಡಿಚ್ಚಾರು ಸ್ವಾಗತಿಸಿ ಅಧ್ಯಕ್ಷರಾದ ಉದಯ ರಾಜ್ ಆಕಾಯಿ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here