ಕೆಎಸ್‌ಆರ್‌ಟಿಸಿ ನಿವೃತ್ತ ಟಿಸಿ ಬೆಳಿಯಪ್ಪ ಗೌಡ ಹೃದಯಾಘಾತದಿಂದ ನಿಧನ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಣಿಯ ದೊಡ್ಡಮನೆ ತರವಾಡು ಮನೆಯ ಯಜಮಾನ, ಕೆಎಸ್‌ಆರ್‌ಟಿಸಿ ನಿವೃತ್ತ ಟಿಸಿ ಬೆಳಿಯಪ್ಪ ಗೌಡ (76ವ.)ಅವರು ಜು.30ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.


ಉಪ್ಪಿನಂಗಡಿಯಲ್ಲಿ ನೆರೆ ವೀಕ್ಷಿಸಿ ಅಂಚೆಕಚೇರಿಗೆ ತೆರಳಿ ಅಲ್ಲಿಂದ ಹೊರಬರುತ್ತಿರುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಫಲಕಾಣದೆ ಅವರು ಅಲ್ಲಿ ಮೃತಪಟ್ಟರು. ಕೆಎಸ್‌ಆರ್‌ಟಿಸಿ ಪುತ್ತೂರು ಡಿಪೋದಲ್ಲಿ ನಿರ್ವಾಹಕನಾಗಿ ಸೇವೆಗೆ ಸೇರಿದ್ದ ಬೆಳಿಯಪ್ಪ ಗೌಡ ಅವರು ಪದೋನ್ನತಿ ಹೊಂದಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸಿ ನಂತರ ನಿವೃತ್ತರಾಗಿದ್ದರು. ಕಣಿಯ ದೊಡ್ಡಮನೆ ತರವಾಡಿನ ಯಜಮಾನರಾಗಿದ್ದ ಅವರು ಪ್ರಗತಿಪರ ಕೃಷಿಕರಾಗಿದ್ದರು. ಸಾರ್ವಜನಿಕ ಕಾರ್ಯಗಳಿಗೆ, ಶಾಲೆಗಳಿಗೆ ಅವರು ಕೊಡುಗೆ ನೀಡಿದ್ದರು. ಮೃತರು ಪತ್ನಿ, ಪುತ್ರ ಸುರೇಶ್, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here