ಪುಣ್ಚಪ್ಪಾಡಿ : ಬಿಜೆಪಿ ಬೂತ್ 69 ಅಧ್ಯಕ್ಷರಾಗಿ ರಾಜೇಶ್ವರಿ ಕೆ ಕನ್ಯಾಮಂಗಲ, ಕಾರ್ಯದರ್ಶಿಯಾಗಿ ಮೋಹಿತ್ ಕೆ ಪೂಜಾರಿಮೂಲೆ

0

ಸವಣೂರು : ಪುಣ್ಚಪ್ಪಾಡಿ ಬಿಜೆಪಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 69ರ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ನೇರೋಳಡ್ಕ ಗೌರಿಸದನ ಸಭಾಂಗಣದಲ್ಲಿ ನಡೆಯಿತು.

ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ತಾರನಾಥ ಕಾಯರ್ಗರವರ ಅಧ್ಯಕ್ಷತೆ ವಹಿಸಿದ್ದರು.

ಬೂತ್ ಸಂಖ್ಯೆ 69 ರ ಅಧ್ಯಕ್ಷರಾಗಿ ರಾಜೇಶ್ವರಿ ಕೆ ಕನ್ಯಾಮಂಗಲ, ಕಾರ್ಯದರ್ಶಿಯಾಗಿ ಮೋಹಿತ್ ಕೆ ಪೂಜಾರಿಮೂಲೆ, ಮತಗಟ್ಟೆ ಏಜೆಂಟ್ ಮಹೇಶ್ ಕೆ ಸವಣೂರು, ಬಿಎಲ್‌2 ಶೀನಪ್ಪ ಶೆಟ್ಟಿ ನೆಕ್ರಾಜೆ, ಮಹಿಳಾ ಸದಸ್ಯೆ ಸೀತಾಲಕ್ಷ್ಮಿ ಪೂಜಾರಿಮೂಲೆ, ಎಸ್‌ಸಿ ಸದಸ್ಯರಾಗಿ ಹೇಮಲತಾ ಕುಮಾರಮಂಗಲ, ಎಸ್‌ಟಿ ಸದಸ್ಯರಾಗಿ ಶಿವಪ್ಪ ನಾಯ್ಕ ನೂಜಾಜೆ, ಓಬಿಸಿ ಸದಸ್ಯರಾಗಿ ತೀರ್ಥನ್ ಬೊಳ್ಳಾಜೆ, ಸದಸ್ಯರುಗಳಾಗಿ ಸುರೇಶ್ ಶೆಟ್ಟಿ ನೆಕ್ರಾಜೆ, ವಿಜಯಕುಮಾರ್ ಕುಮಾರಮಂಗಲ, ಪ್ರವೀಣ್ ಶೆಟ್ಟಿ ನೂಜಾಜೆ, ವೆಂಕಪ್ಪ ಗೌಡ ಓಂತಿಮನೆ ಮೊದಲಾದವರು ಆಯ್ಕೆಗೊಂಡರು.

ಸಭೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಶಂಕರ ಸುಲಾಯ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಗಣೇಶ್ ನಿಡ್ವಣ್ಣಾಯ, ಸೀತಾಲಕ್ಷ್ಮಿ ಪೂಜಾರಿಮೂಲೆ, ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಹಾಲು ಉತ್ಪಾದಕರ ಸಹಕಾರಿ. ಸಂಘದ ಉಪಾಧ್ಯಕ್ಷೆ ಆಶಾ ರೈ ಕಲಾಯಿ, ಪಕ್ಷದ ಪ್ರಮುಖರಾದ ಲಿಂಗಪ್ಪ ರೈ ಚೆಂಬುತ್ತೋಡಿ, ನಾಗರಾಜ ನಿಡ್ವಣ್ಣಾಯ, ವೆಂಕಟೇಶ್ ಭಟ್ ಅಂಜಯ, ನಾಗೇಶ್ ಓಡಂತರ್ಯ ಮೊದಲಾದವರು ಉಪಸ್ಥಿತರಿದ್ದರು.

ಪುಣ್ಚಪ್ಪಾಡಿ ಶಕ್ತಿಕೇಂದ್ರದ ಪ್ರಮುಖ್ ಮಹೇಶ್ ಕೆ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here