ಪುತ್ತೂರು: ಸುಬ್ರಹ್ಮಣ್ಯ ಇಲೆಕ್ಟ್ರಿಕಲ್ಸ್ ಮ್ಹಾಲಕ ಕೆ.ಎಮ್ ಚಂದ್ರಶೇಖರ ಹೃದಯಾಘಾತದಿಂದ ನಿಧನ

0

ಪುತ್ತೂರು: ಪುತ್ತೂರು ಹಾಗೂ ಸಂಪ್ಯದಲ್ಲಿರುವ ಸುಬ್ರಹ್ಮಣ್ಯ ಇಲೆಕ್ಟ್ರಿಕಲ್ಸ್‌ನ ಮ್ಹಾಲಕ ಬರಿಮಾರು ಗ್ರಾಮದ ಬರಿಮಾರು ದೇವಸ್ಥಾನದ ಬಳಿ ನಿವಾಸಿ ಕೆ.ಎಮ್ ಚಂದ್ರಶೇಖರ(63ವ.)ರವರು ಆ.1ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಚಂದ್ರಶೇಖರರವರು ಕಳೆದ ಸುಮಾರು 35 ವರ್ಷಗಳಿಂದ ಸಂಪ್ಯ ಹಾಗೂ ಪುತ್ತೂರಿನಲ್ಲಿ ಸುಬ್ರಹ್ಮಣ್ಯ ಇಲೆಕ್ಟ್ರಿಕಲ್ ಎಂಬ ಸಂಸ್ಥೆಯನ್ನು ಹೊಂದಿದ್ದರು. ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿ ಎಲ್ಲರಿಗೂ ಚಿತಪರಿಚಿತರಾಗಿದ್ದರು.
ಮೃತರು ಪತ್ನಿ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಲಿದ್ದಾರೆ.

LEAVE A REPLY

Please enter your comment!
Please enter your name here