ಕುಂಞಿಮೂಲೆ 37ನೇ ವರ್ಷದ ಗಣೇಶೋತ್ಸವ ಸಮಿತಿಗೆ ಆಯ್ಕೆ-ಅಧ್ಯಕ್ಷ ಅಶ್ವಥ್ ದರ್ಬೆ, ಪ್ರ.ಕಾರ್ಯದರ್ಶಿ ಪುರಂದರ ದರ್ಬೆ

0

ಪುತ್ತೂರು:ಇರ್ದೆ ಗ್ರಾಮದ ದೂಮಡ್ಕ ಕುಂಞಿಮೂಲೆ ಶ್ರೀ ಸಿದ್ದಿ ವಿನಾಯಕ ಭಕ್ತವೃಂದದಿಂದ ನಡೆಯುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಶ್ವಥ್ ದರ್ಬೆ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಪುರಂದರ ದರ್ಬೆ ಆಯ್ಕೆಯಾಗಿದ್ದಾರೆ.


ಸಮಿತಿಯ ಉಪಾಧ್ಯಕ್ಷರಾಗಿ ವೆಂಕಟ್ರಮಣ ಶಾಸ್ತ್ರಿ, ಕೊಶಾಧಿಕಾರಿಯಾಗಿ ಶ್ರೀಹರಿ ಡಿ. ಕಾರ್ಯದರ್ಶಿಯಾಗಿ ಯತೀಶ ಬಾಳೆಮೂಲೆ, ವೈದಿಕ ಸಂಚಾಲಕರಾಗಿ ರಾಜಾರಾಮ್ ಭಟ್, ಕ್ರೀಡಾ ಸಂಚಾಲಕರಾಗಿ ದೇವಪ್ಪ ನಾಯ್ಕ, ಮೆರವಣಿಗೆ ಸಂಚಾಲಕರಾಗಿ ಐತ್ತಪ್ಪ ನಾಯ್ಕ ಜೆ., ಪರಮೇಶ್ವರ ನಾಯ್ಕ, ಸ್ವಯಂ ಸೇವಾ ಸಂಚಾಲಕರಾಗಿ ಜಯರಾಜ್ ಕುಂಞಿಮೂಲೆ, ಹರೀಶ ಕಟೀಲ್ತಡ್ಕ, ಅಲಂಕಾರ ಸಮಿತಿ ಸಂಚಾಲಕರಾಗಿ ಮೋಹನ ಜೆ., ದಯಾನಂದ ಕೆ. ಹಾಗೂ ರಕ್ಷಿತ್ ಬಳ್ಳ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here