’ಶಾರದಾನಗರದ ಬೊಲ್ಪು’ ಆಡಿಯೋ ಬಿಡುಗಡೆ

0

ರಾಮಕುಂಜ: ಟೀಮ್ ಸಪ್ತಸಾಗರ ಅರ್ಪಿಸುವ ’ಶಾರದಾನಗರದ ಬೊಲ್ಪು’ ಆಡಿಯೋ ಬಿಡುಗಡೆ ಸಮಾರಂಭ ರಾಮಕುಂಜ ಗ್ರಾಮದ ಶಾರದಾನಗರ ಸಂಜೀವ ಅವರ ಮನೆಯ ಕೊರಗಜ್ಜನ ಸನ್ನಿಧಾನದಲ್ಲಿ ಆ.4ರಂದು ನಡೆಯಿತು.


ಪೊಡಿಯಾ ಇಂದ್ರಾಂಡ ಆಡಿಯೋ ಬಿಡುಗಡೆಗೊಳಿಸಿದರು. ಚಲ್ಲ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಎ.ಎನ್.ಕೊಳಂಬೆ ಶಾರದಾನಗರ ಶುಭಹಾರೈಸಿದರು. ವಿಶ್ವನಾಥ ಪೂಜಾರಿ ಶಾರದಾನಗರ, ಸಂಜೀವ ಶಾರದಾನಗರ, ಶಶಿಧರ, ಸತೀಶ ಬಿಳಿಯೂರು ಮತ್ತಿತರರು ಉಪಸ್ಥಿತರಿದ್ದರು. ತೇಜಸ್ವಿನಿ ಶಾರದಾನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವ್ಯ ಶಾರದಾನಗರ ಸ್ವಾಗತಿಸಿ, ಅಕ್ಷಯ್ ವಂದಿಸಿದರು. ಸೇವಾ ಪ್ರತಿನಿಧಿ ನವೀನ್‌ಕುಮಾರ್ ನಿರೂಪಿಸಿದರು. ರಾಮಚಂದ್ರ ಪ್ರಾರ್ಥಿಸಿದರು. ಆಡಿಯೋಗೆ ಸತೀಶ್ ಬಿಳಿಯೂರು ಸಾಹಿತ್ಯ ನೀಡಿದ್ದು ವೇದಾವತಿ ಕೈಮಾರು ಗಾಯನದಲ್ಲಿ ಸಹಕರಿಸಿದ್ದಾರೆ. ಸಂಜೀವ ಶಾರದಾನಗರ ನಿರ್ಮಾಣ ಮಾಡಿದ್ದಾರೆ.

LEAVE A REPLY

Please enter your comment!
Please enter your name here