ಉಪ್ಪಿನಂಗಡಿ-ಸುಬ್ರಹ್ಮಣ್ಯ ಬಸ್ಸಿನಲ್ಲಿ ಪ್ರಯಾಣಿಕನ ರಂಪಾಟ, ಕಂಡಕ್ಟರ್‌ಗೆ ಹಲ್ಲೆ

0

ಕಡಬ: ಪ್ರಯಾಣಿಕನೋರ್ವ ಕರ್ತವ್ಯ ನಿರತ ಬಸ್ ಕಂಡಕ್ಟರ್‌ಗೆ ಹಲ್ಲೆ ನಡೆಸಿ ಬಸ್ಸಿನಲ್ಲಿ ರಂಪಾಟ ನಡೆಸಿದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ಬಸ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಸ್ಸಿನಲ್ಲಿ ಶಾಲಾ ಮಕ್ಕಳು ಹಾಗೂ ಇತರ ಪ್ರಯಾಣಿಕರು ಇದ್ದು ಬಸ್ಸು ಕೆಮ್ಮಾರ ಬಳಿ ತಲುಪುತ್ತಿದ್ದಂತೆ ನಿರ್ವಾಹಕ ಪ್ರಯಾಣಿಕರೋರ್ವರಲ್ಲಿ ಟಿಕೇಟ್ ಕೇಳಿದರು. ಈ ವೇಳೆ ಚಿಲ್ಲರೆ ವಿಚಾರದಲ್ಲಿ ಪ್ರಾಮಾಣಿಕ ನಿರ್ವಾಹಕನ ಜೊತೆ ತಗಾದೆ ತೆಗೆದು ರಂಪಾಟ ನಡೆಸಿ ಬಸ್ ಕಿಟಕಿಯನ್ನು ಹಾನಿಗೈದದ್ದಲ್ಲದೆ ಕಂಡೆಕ್ಟರ್ ರಫೀಕ್ ಎಂಬವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.

ಘಟನೆ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here